ಅಮೀನ್ ರೆಡ್ಡಿ ಯಾಳಗಿ ಗೆಲುವಿಗಾಗಿ ಸಗರ ಸೋಫಿಸರಮಸ್ತ ದರ್ಗಾಕ್ಕೆ ಉರುಳುಸೇವೆ

ಶಹಾಪುರ : ಶಹಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮ್ಮಿನ್ ರೆಡ್ಡಿ ಯಾಳಗಿ ಗೆಲುವಿಗಾಗಿ ಸಗರ ಗ್ರಾಮದ ಸಗರ ಸೋಫಿಸರಮಸ್ತ ದರ್ಗಾಕ್ಕೆ ಅಮೀನ್ ರೆಡ್ಡಿ ಯಾಳಗಿ ಅಪ್ಪಟ ಅಭಿಮಾನಿ ಭೀಮಣ್ಣ ಸಾಹೇಬಗೌಡ ಪೊಲೀಸ ಪಾಟೀಲ ಹಾಗೂ ಸಾಯಬಣ್ಣ ಯಂಕಪ್ಪ ಇನಾಂಮದಾರ ದರಿಯಾಪೂರ ರವರು ಉರಳು ಸೇವೆ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೀನ ದಲಿತರ ಬಡವರ ಆಶಾಕಿರಣವಾದ ಅಮೀನ್ ರೆಡ್ಡಿ ಯಾಳಗಿ  ಶಹಾಪುರ ಕ್ಷೇತ್ರದ ಶಾಸಕರಾಗಬೇಕು.ಶಹಪೂರ ಕ್ಷೇತ್ರದ ಬಡವರಿಗೆ ಮತ್ತು ದಲಿತರಿಗೆ ಸಿಗುವ ಎಲ್ಲಾ ಮೂಲಭೂತ ಸೌಕರ್ಯಗಳು ಗ್ರಾಮೀಣ ಪ್ರದೇಶ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳು ದೊರಕುತ್ತವೆ ಹಾಗೂ ನಗರದಲ್ಲಿ ಶಹಪುರ ಸ್ವಚ್ಛತಾ ಕಾರ್ಯ ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದರು.

ದರ್ಗಾದಲ್ಲಿ ಉರುಳುಸೇವೆ ಮಾಡಿದ ಅಭಿಮಾನಿಗಳಿಗೆ ಅಪ್ಪುಗೌಡ ಯಾಳಗಿ ತಿರುಪತಿ ಹತ್ತಿಕಟಗಿ ಉಮೇಶ ಮಹಾಮನಿ ಅಬ್ದುಲ ಹಾದಿಮನಿ ಮಂಜು ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

About The Author