ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಚನ್ನಬಸವ ಅವರಿಗೆ ಸನ್ಮಾನ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್ ಸದಸ್ಯರಾಗಿ ಚನ್ನಬಸವ ಅವರನ್ನು ಸರ್ಕಾರ ಆಯ್ಕೆ ಮಾಡಿದ್ದು ಅವರಿಗೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆ. ರಮೇಶ್ ಮೂಡಲದಿನ್ನಿ, ಜಿಲ್ಲಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ರಾಯಚೂರು, ವೀರೇಶ್ ಡಿ ರಾಂಪುರ ತಾಲೂಕಾಧ್ಯಕ್ಷರು, ತಿಮ್ಮಪ್ಪ ಮರ್ಚಾಟ್ಹಾಳ, ನರಸಣ್ಣ ಶಾಸ್ತ್ರಿ, ರಾಮನಗೌಡ, ಗೂಳಪ್ಪ,ವಿಷ್ಣು ಬೊಮ್ಮನಾಳ, ಅಮರೇಶ ಸ್ವಾಮಿ, ವೀರೇಶ್ ಮೂಡಲದಿನ್ನಿ ಸೇರಿದಂತೆ ಇತರರು ಇದ್ದರು.

About The Author