ದೇವದುರ್ಗ ಕಾಲೇಜು ಉಪನ್ಯಾಸಕನ ಕಗ್ಗೊಲೆ

ಶಹಾಪುರ:ಮಾನಪ್ಪ ತಂದೆ ತಿಪ್ಪಣ್ಣ [59] ಸಾ,ಗೊಪಾಳಪೂರ ತಾ. ದೇವದುರ್ಗಾ ತಾಲುಕಿನ ನಿವಾಸಿ ಎಂದು ಹೇಳಲಾದ ಕಾಲೇಜು ಉಪನ್ಯಾಷಕರೊಬ್ಬರನ್ನು ನಡು ರಸ್ತೆಯಲ್ಲೆ ಕೊಲೆ ಮಾಡಿದ ಘಟನೆ ವಡಗೇರ ತಾಲುಕಿನ ಮರಕಲ್ ಗ್ಸ
ಗ್ರಾಮದ ಸಮೀಪದಲ್ಲಿ ನಡೆದಿದೆ ?. ಮೃತ ಸಣ್ಣ ಮಾನಪ್ಪ ದೇವದುರ್ಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಇಬ್ಬರು ಪತ್ನಿಯರೆಂದು ತಿಳಿದು ಬಂದಿದೆ. ಮೊದಲೆಯ ಪತ್ನಿ ಕಲಬುರ್ಗಿಯಲ್ಲಿ ವಾಸವಾಗಿದ್ದು. ಎರಡನೇ ಪತ್ನಿ ವಡಗೇರಾ ತಾಲುಕಿನ ಹಯ್ಯಾಳ ಬಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ದೇವದುರ್ಗಾದಿಂದ ಹೆಂಡತಿ ತವರೂರು ಹಯ್ಯಾಳ ಬಿ ಗ್ರಾಮಕ್ಕೆ ಬರುವಾಗ ರಸ್ತೆ ಮಾರ್ಗದ ಮಧ್ಯದಲ್ಲಿ ಅಪರಿಚಿತರು ಉಪನ್ಯಾಸಕನನ್ನು ಕೊಂದು ತೆಲೆಯ ಮೇಲೆ ಕಲ್ಲೇತ್ತಿ ಹಾಕಿ ಸಾಯಿಸಿದ್ದಾರೆ ಎಂದು ಹೆಳಲಾಗುತ್ತಿದೆ. ಈ ಕುರಿತು ಮೃತನ ಸಹೋದರ ಶಹಾಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪಿಐ ಶ್ರೀನಿವಾಸ ಅಲ್ಲಾಪುರೆಯವರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.

About The Author