ಬೆಂಗಳೂರು:ಇಂದು ಬೆಂಗಳೂರು ನಗರದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವನಗೌಡ ದದ್ದಲ್ ರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.ಈ ಸಂದರ್ಭದಲ್ಲಿ ಹುಣಸಿಹಾಳ ಹುಡಾದ ಕಾಂಗ್ರೆಸ್ ಕಾರ್ಯಕರ್ತರಾದ ನರಸಣ್ಣ ಶಾಸ್ತ್ರಿ, ಚನ್ನಬಸವ, ರಾಘವೇಂದ್ರ ಪರಮೇಶ, ಸಾಬಣ್ಣ, ಲಿಂಗಣ್ಣ,ಮಂಜು,ಯಂಕಪ್ಪ ಸೇರಿದಂತೆ ಹಲವರು ಸನ್ಮಾನ ಮಾಡಿ ಗೌರವಿಸಿದರು.