ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷರಾಗಿ ಭೀಮರಾಯ ನೇಮಕ

ಶಹಾಪುರ : ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷರಾಗಿ ಭೀಮರಾಯ ಕರೆಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ನೀಲಕಂಠ ಬಡಿಗೇರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ್ ಅವರು ಭೀ ಗುಡಿಯ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷರಿಗೆ ನೇಮಕಾತಿ ಆದೇಶ ಪತ್ರ ನೀಡಿ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷ
ಗೆಲ್ಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಶಿವುಮಾಂತಪ್ಪ ಚಂದಾಪುರ, ಶಂಕರ ಸಿಂಗೇ,ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ್ ಕುಮಾರ್ ಸುರಪುರ, ಹನುಮಂತ್ರಾಯ ಗೌಡ, ವಿಜಯ್ ಕುಮಾರ್ ಜಟ್ಯಪ್ಪ ರವಿಚಂದ್ರ ರಾಮಣ್ಣ ಸಾಧ್ಯಪುರ ಭೀಮರಾಯ ಜುನ್ನ ಲಕ್ಷ್ಮಣಶೆಟ್ಟಿ ಶಿವಕುಮಾರ್ ದೊಡ್ಮನಿ ಅಯ್ಯಪ್ಪ ಕದರಪುರ ವೆಂಕಟೇಶ್ ಆಲೂರು ಸೇರಿದಂತೆ ಇತರರು ಇದ್ದರು.

About The Author