ಶಹಾಪುರ ನಗರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ,ಕೇಸರಿ ಪಡೆಯಲ್ಲಿ ಜೋಶ್

 ಶಹಾಪುರ : ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ  ಬಿ ವೈ ವಿಜಯೇಂದ್ರ ಅವರು ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ  ಹಿನ್ನಲೆಯಲ್ಲಿ  ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.ನಗರದ ಪ್ರಮುಖ ಬೀದಿಯಲ್ಲಿ ದೊಡ್ಡ ದೊಡ್ಡ ಕಟೌಟ್ಗಳು, ಧ್ವಜಗಳು, ಸ್ವಾಗತ ಕಮಾನುಗಳು ಹಾಗೂ ಕೇಸರಿ ಪರಾರಿಗಳು ನಗರದಲ್ಲಿ ರಾರಾಜಿಸುತ್ತಿವೆ.
ನಗರದ ಪ್ರಮುಖ ಬೀದಿ ಕೇಸರಿಮಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅಮೀನ್ ರೆಡ್ಡಿ ಯಾಳಿಗಿ ಅವರು ಸಹ ಯುವಕರಾಗಿದ್ದು  ಕೇಸರಿ ಪಡೆಯ ಯುವಕರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ.ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಿಂದ ಪಕ್ಷವನ್ನು ಸಂಘಟನೆ ಮಾಡುವ ಹಾಗೂ ಪಕ್ಷದ ಮುಖಂಡರು‌, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಸಲುವಾಗಿ ಪ್ರವಾಸಕೈಗೊಳ್ಳಲಾಗಿದೆ. ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಬಿವೈ ವಿಜಯೇಂದ್ರರವರು ನಗರಕ್ಕೆ ಆಗಮಿಸಿ  ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಮೀನ್ ರೆಡ್ಡಿ ಯಾಳಗಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಗರಕ್ಕೆ ೩.೩೦ಕ್ಕೆ ಆಗಮಿಸಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಥಮದಲ್ಲಿ ಬಿಜೆಪಿ ಬೂತ ಅಧ್ಯಕ್ಷರ ಮನೆಗೆ ಬೆಟ್ಟಿ.೩.೫೦ ಗಂಟೆಗೆ ನಗರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ, ೪.೨೦ ಗಂಟೆಗೆ ಜಿಲ್ಲಾಧ್ಯಕ್ಷರ ಮನೆಯಲ್ಲಿ ಚಾಹಾಕೂಟ. ೪.೪೫ ಗಂಟೆಗೆ ನಗರ ಮಾಹಾತ್ಮ ಬಸವೇಶ್ವರಪ್ರತಿಮೆಗೆ ಪುಷ್ಪಾರ್ಚನೆ. ನಂತರದಲ್ಲಿ ೫ ಗಂಟೆಗೆ ಇಲ್ಲಿನ ಸಿಪಿಎಸ್, ಶಾಲಾ ಮೈಧಾನದಲ್ಲಿ  ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ. ರಾಜೀವ, ರಾಜುಗೌಡ, ಸಂಸದ ರಾಜ ಅಮರೇಶ್ವರ ನಾಯಕ್, ಮಾಜಿ ಶಾಸಕ ವೆಂಕಟರೆಡ್ಡಿ ಮದ್ನಾಳ, ಸೇರಿದಂತೆ ರಾಜ್ಯ ರಾಜಕೀಯ ದುರಿಣರು ಸಂಸದರು, ಬಿಜೆಪಿ ಮುಖಂಡರು ಆಗಮಿಸುವರು ಎಂದು ತಿಳಿದು ಬಂದಿದೆ, ಸುಮಾರು ೧೦  ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಅಂದಾಜು ೧೦ ಸಾವಿರಕ್ಕಿಂತಲೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರಿಕ್ಷೆಯಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳ ತಿಳಿಸಿವೆ,
ಯುವಕರ ಕಣ್ಮಣಿ, ಧಣಿವರಿಯದ ಜನನಾಯಕ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಯವರ ಮುಂದಾಳತ್ವ ಮತ್ತು ಕಾರ್ಯತಂತ್ರದಲ್ಲಿ  2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಜಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಕಾರ್ಯಕರ್ತರು ಹೆಚ್ಚು ಹುಮ್ಮಸ್ಸಿನಿಂದ ಪ್ರತಿ ಮನೆಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿಕೊಡಬೇಕು. ಸಕ್ರಿಯವಾಗಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಯುವಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಅಮಿನ್ ರೆಡ್ಡಿ ಯಾಳಗಿ.
ನೂತನ ಬಿಜೆಪಿ ಜಿಲ್ಲಾಧ್ಯಕ್ಷರು ಯಾದಗಿರಿ.
ಯುವನಾಯಕ ಯುವಕರ ಕಣ್ಮಣಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಶಹಪುರ ನಗರಕ್ಕೆ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಅದ್ದೂರಿ ಕಾರ್ಯಕ್ರಮ ಯಶಸ್ವಿಗೊಳ್ಳಲಿದೆ.

ಕರಣ್ ಸುಬೇದಾರ್ ಬಿಜೆಪಿ ಮುಖಂಡರು ಶಹಪುರ

About The Author