ಅವರವರ ಭಾವ ಭಕುತಿಯ ರಾಮ

ಕಲ್ಯಾಣ ಕಾವ್ಯ : ಅವರವರ ಭಾವ ಭಕುತಿಯ ರಾಮ : ಮುಕ್ಕಣ್ಣ ಕರಿಗಾರ

ಗಾಂಧೀಜಿಯವರಿಗೆ ಸರ್ವಸ್ವವೂ ಆಗಿದ್ದ
ರಾಮ
ಮಹಾತ್ಮರ ಉಸಿರಾಗಿದ್ದ
ರಾಮ
ಗಾಂಧೀಜಿಯವರ ಕನಸಿನ ಸುಖೀರಾಜ್ಯದ ಹೆಸರಾಗಿದ್ದ
ರಾಮ
ಉಸಿರುಹೋಗುವಾಗಲು ಗಾಂಧೀಜಿ ಅಂದದ್ದು
ಹೇ! ರಾಮ್.
ಈಗಿನವರು ಇರಬಯಸಿದ್ದಾರೆ
ರಾಮನ ಹೆಸರಿನಲ್ಲೆ
ಆ ರಾಮ
ಅದಕ್ಕಾಗಿ ಕರೆಯುತ್ತಿದ್ದಾರೆ
ರಾಮನನ್ನು ತಮ್ಮ ನೆಂಟ ಎಂಬಂತೆ
ಹಾ ರಾಮ !
ಭರತಖಂಡದ ಹೆಮ್ಮೆ ಆಗಬೇಕಿದ್ದ
ತತ್ತ್ವರಾಮ
ಆರ್ ಎಸ್ ಎಸ್ ,ಬಿಜೆಪಿಯವರಿಗೆ
ಸತ್ತ್ವರಾಮನಾದ
ಚುನಾವಣೆ ಗೆಲ್ಲುವ ಅಸ್ತ್ರವಾದ !

೨೬.೦೧.೨೦೨೪

About The Author