ಕಸಾಪ ಕಾರ್ಯಕಾರಿ ಸಭೆ | ಭೀಗುಡಿ ವಲಯ ಪದಾಧಿಕಾರಿಗಳ ಆಯ್ಕೆ

ಶಹಾಪುರ: ನಗರದ ಕಸಾಪ ಭವನದಲ್ಲಿ ಭೀಮರಾಯನ ಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ ವಲಯ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರ ಹೊಸಮನ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನಗಳ ಇತಿಹಾಸ ಹೊಂದಿದ್ದು ನಾಡು ನುಡಿಗಾಗಿ ಸ್ಥಾಪನೆಗೊಂಡಂತ ಈ ಪರಿಷತ್ತು ಇಂದು  ರಾಜ್ಯ ಜಿಲ್ಲಾ ತಾಲೂಕು ಮಟ್ಟದಲ್ಲಿ ಅದೇ ರೀತಿಯಾಗಿ ಹೋಬಳಿಯ ಮಟ್ಟದಲ್ಲಿ  ಅಸ್ತಿತ್ವವನ್ನು ಆವರಿಸಿಕೊಂಡು ನಾಡಿನ ಜನರ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದರ ಕಾರ್ಯವನ್ನು ಕೊಂಡಾಡುವುದು ಹಿರಿಮೆಯ ವಿಷಯವಾಗಿದೆ.ಈ ಒಂದು ಉದ್ದೇಶದಿಂದ ಇಂದು ಭೀಮರಾಯನ ಗುಡಿಯ ವಲಯವನ್ನು ಮಾಡಿ ಅನೇಕ ಸಾಹಿತಿಗಳಿಗೆ ಸಂಶೋಧಕರಿಗೆ ಸಾಹಿತ್ಯ ಆಸಕ್ತರಿಗೆ ಸಾಹಿತ್ಯ ಅಭಿಮಾನಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಹಲವಾರು ಹಿರಿಯ ಸಾಹಿತಿಗಳು ಸಂಶೋಧಕರು ಚಿಂತಕರು ಈ ಒಂದು ಭಾಗದಲ್ಲಿ ಬಾಳಿಹೋಗಿದ್ದಾರೆ ಬಾಳಿ ಬದುಕಿದ್ದರೂ ಅವರ ಒಂದು ಸ್ಮರಣೀಯ ಅನುಕೂಲಕ್ಕಾಗಿ ಮತ್ತು ಇತಿಹಾಸ ಸಂಶೋಧನೆಗಾಗಿ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ತಾಲೂಕು ಮಟ್ಟದ ಸಮ್ಮೇಳನಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ನುಡಿದರು.
 ವಲಯ ಅಧ್ಯಕ್ಷರಾದ ಶರಣಬಸವ ಸೈದಾಪೂರ ಅವರು ವಲಯ ಪದಾಧಿಕಾರಿಗಳನ್ನು ನೇಮಕ ಮಾಡಿದರು.ಗೌರವ ಕಾರ್ಯದರ್ಶಿಯಾಗಿ ಸುಭಾಷ್ ಪೂಜಾರಿ ಹೋತಪೇಟ ಗೌರವ ಕೋಶಧ್ಯಕ್ಷರಾಗಿ ಪರಶುರಾಮ ,ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಭೀಮಣ್ಣ ಹೂಗಾರ್ ಹೊತಪೇಟ,ಮಹಿಳಾ ಪ್ರತಿನಿಧಿಯಾಗಿ ಶಾರದಾ ಲತಾ ಹಿರೇಮಠ,ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಗೌಡಪ್ಪ ಗೌಡ ಉಮಾರದೊಡ್ಡಿ,ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಶಿವಶರಣಪ್ಪ ಬಿ ಲಕ್ಷ್ಮೀಪುರ,ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಇಬ್ರಾಹಿಂ ಪಟೇಲ,ಪದನಿಮಿತ್ಯ ಆಡಳಿತಾಧಿಕಾರಿಯಾಗಿ ಮಶಾಕ್ ಸಾಬ್ ಇನಾಂದಾರ,ಆಡಳಿತಾಧಿಕಾರಿಯಾಗಿ ದೇವೇಂದ್ರಪ್ಪ ಮಡಿವಾಳಕರ ಗೌರವ ಸಲಹೆಗಾರರಾಗಿ ಭೀಮಣ್ಣ ಶಖಾಪುರ,ಮಲ್ಲಾರೆಡ್ಡಿ ಪಾಟೀಲ್ ಹೋತಪೇಟ,ಸಂಗನಬಸಪ್ಪ ಹಾದಿಮನಿ,ದೇವು ಬಿ ಗುಡಿ,ಮೂರ್ತಿ ಮುದುಗಲ್,ಭೀಮಶಂಕರ್ ಗಂಗಾನೂರ್,ಮಾನಪ್ಪ ಗೌಡ ಕಮತರೆಡ್ಡಿ,ಗೀತಾಂಜಲಿ ಮಾಳಗಿ,ಮಲ್ಲಿನಾಥ್ ,ಮಲ್ಲಿಕಾರ್ಜುನ ಹೋತಪೇಠ,ಭೀಮರಾಯ ,ಬದ್ದು , ಮಮ್ತಾಜ್ ಬೇಗಂ,ಅವರನ್ನು  ನೇಮಕ ಮಾಡಿದರು.ಈ ಸಂದರ್ಭದಲ್ಲಿ ಮಡಿವಾಳಪ್ಪ ಪಾಟೀಲ ನಿರೂಪಿಸಿ ಸ್ವಾಗತಿಸಿದರು.ತಿಪ್ಪಣ್ಣ ಕ್ಯಾತನಾಳ ಮೌನೇಶ ಹಳಿಸಗರ ಸಂಗಮೇಶ್ ಕುಂಬಾರ ಭಾಗವಹಿಸಿದ್ದರು.

About The Author