ಸಾಮಾಜಿಕ ಬದಲಾವಣೆಗೆ ಮಹಾಯೋಗಿ ವೇಮನ ಕೊಡುಗೆ ಅಪಾರ

yadgiri ಶಹಾಪುರ: ಮಹಾಯೋಗಿ ವೇಮನ ಅವರು ಅತ್ಯಂತ ಜನಪ್ರಿಯ ಕವಿ ಲೋಕದ ಸಂಗತಿಗಳನ್ನು ನಾಲ್ಕು ಸಾಲಿನ ಪದ್ಯದಲ್ಲಿ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ, ಅಂತರಂಗ ಶುದ್ದಿಗೆ ಹೆಚ್ಚು ಒತ್ತು ನೀಡಿದವರು. ಸಮಾಜದಲ್ಲಿರುವ ತೊಡಕುಗಳನ್ನು ಅರಿತು ಸಮಾಜ ಬದಲಾವಣೆಗೆ ಮುಂದಾಗಿದ್ದಾರೆ ಎಂದು  ಮುಖ್ಯಗುರು ಸಂಗೀತಾ  ತಿಳಿಸಿದರು.
       ತಾಲೂಕಿನ ಕೊಡಮನಹಳ್ಳಿಯಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಹಾಯೋಗಿ ವೇಮನ ಜಯಂತಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,  ವೇಮನರು ಯೋಗಿ ಮತ್ತು ಸಾಮಾಜಿಕ ಚಿಂತಕರು. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ. ವಿದ್ಯಾರ್ಥಿಗಳು ವೇಮನ ಅವರ ವಿಚಾರಧಾರೆಗಳನ್ನು ಸ್ಮರಿಸಬೇಕು, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.ಈ ಸಂದರ್ಭದಲ್ಲಿ ಶಿಕ್ಷಕ ಕುಮಾರ, ಮಾಳಪ್ಪ, ಬಸವರಾಜ, ಚಂದ್ರಕಲಾ,  ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author