yadagiri ಶಹಾಪುರ : ನಗರದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ,ಸಂಸದೀಯ ಪಟು,ಅಜಾತಶತ್ರು, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.ಬಿ ಜೆ ಪಿ ಹಿರಿಯ ಮುಖಂಡರಾದ ಶಿವರಾಜ ದೇಶಮುಖ ಮಾತನಾಡಿ,ದೇಶದ ಹಲವು ಅಭಿವೃದ್ಧಿ ಕಾರ್ಯಗಳು ವಾಜಪೇಯಿ ಅವರ ಹೆಸರನ್ನು ಜೀವಂತವಾಗಿರಿಸಲು.ಅಂತಹ ವ್ಯಕ್ತಿಗಳ ಆದರ್ಶ ನಮಗೆ ದಾರಿದೀಪ ಎಂದರು. ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೋನೇರ, ವಾಜಪೇಯಿಯವರ ಸಂಪೂರ್ಣ ಜೀವನ ಚರಿತ್ರೆ ಹಾಗೂ ರಾಜಕೀಯ ಸಾಧನೆ ಮತ್ತು ಅವರ ದೇಶಭಕ್ತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗುರುಕಾಮಾ, ಹಿರಿಯ ಮುಖಂಡರಾದ, ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೋನೇರ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ರಾಘವೇಂದ್ರ ಯಕ್ಷಂತಿ, ಪ್ರಕಾಶ ಸಜ್ಜನ್,
ಮಲ್ಲಿನಾಥ ಬಡಿಗೇರ,ಸಿದ್ದಯ್ಯ ಸ್ವಾಮಿ ಹಿರೇಮಠ, ಚಂದ್ರಶೇಖರ ಎಸ್ ಯಾಳಗಿ, ರಾಜು ಪಂಚಭಾವಿ, ರಂಗಣ್ಣ ಜಿರ್ಲೆ, ಸಂಗಪ್ಪ ದೊರಿ, ಲಕ್ಷ್ಮೀಕಾಂತ ಬಿರಾಳ, ದೇವಿಂದ್ರ ರಾಂಪೂರ, ಭೀಮರಾಯ ಪೂಜಾರಿ, ಮಲ್ಲಪ್ಪ ನಾಯ್ಕೋಡಿ, ದೇವಿಂದ್ರಪ್ಪ ಬಂದೊಡ್ಡಿ, ತುಕಾರಾಮಕರಕಳ್ಳಿ, ಭೀಮರಾಯ ಕರಕಳ್ಳಿ, ಶರಣು ಟೋಕಾಪೂರ, ಅರುಣ ಗಾಂಜಿ, ಪರಶುರಾಮ, ಭೀಮರಾಯ ಕುರಿ,ಸೋಪಣ್ಣ ಬಿ ಸಗರ, ಹುಸನಪ್ಪ ಬಿ, ವಿರೇಶ ಸುರಪುರಕರ್, ನಾಗರಾಜ ಹುಣಸಗಿ, ಬನ್ನಪ್ಪ ಸುರಪುರಕರ್, ಸಂಗಪ್ಪ ಪೇಂಟರ್, ಪ್ರಭು ದೊಡ್ಡಮನಿ, ಸಾಗರ ಹೋತಪೇಠ, ಮಂಜುನಾಥ ಅಲಬಾನೂರ್, ವೆಂಕಟೇಶ ಗೌನಳ್ಳಿ ಹಾಗೂ ಕಾರ್ಯಕರ್ತರು ಬಂಧುಗಳು ಉಪಸ್ಥಿತರಿದ್ದರು.