ಗೊಂಡ ಪರ್ಯಾಯ ಪದಕ್ಕೆ ಕುರುಬ ಪದ ಪರಿಗಣಿಸಲು ಕೇಂದ್ರಕ್ಕೆ ಮನವಿ.ಡಿ.28ರಂದು ಪ್ರತಿಭಟನೆ ಪೂರ್ವಭಾವಿ ಸಭೆ

ಶಹಾಪೂರ : ಗೊಂಡ ಪರ್ಯಾಯ ಪದಕ್ಕೆ ಕುರುಬ ಪದ ಪರಿಗಣಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲು ಡಿ.28ರಂದು ತಾಲೂಕು ಕುರುಬ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅದರ ನಿಮಿತ್ತವಾಗಿ ಡಿ.17 ರವಿವಾರ ಬೆಳಿಗ್ಗೆ 10 -00 ಗಂಟೆಗೆ ನಗರದ ಭೀರಲಿಂಶ್ವರ ದೇವಾಸ್ಥಾನದ ಸಭಾಂಗಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂತಣಿ ಬ್ರಿಜ್ ನ ಪೂಜ್ಯರಾದ ಶ್ರೀಶ್ರೀ ಸಿದ್ದರಾಮಾನಂದ ಪೂಜ್ಯರು ನಿರ್ದಶನದಂತೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷರಾದ ಡಾ.ಭೀಮಣ್ಣ ಮೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವಭಾವಿ ಸಭೆಯಲ್ಲಿ ತಾಲೂಕು ಕುರುಬ ಸಂಘದ ಪದಾಧಿಕಾರಿಗಳು,ಹಿರಿಯ ಮುಖಂಡರು ಹಾಗೂ ರಾಯಣ್ಣ ಯುವ ಪಡೆಯ ಅಧ್ಯಕ್ಷರು ಮತ್ತುಪದಾಧಿಕಾರಿಗಳು,ಕನಕ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಂಗೊಳ್ಳಿ ರಾಯಣ್ಣ ಯುವ ಘಟಕದ ಅಧ್ಯಕ್ಷರು ಮತ್ತು ಪದಾದಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ಆಗಮಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ತಿಳಿಸಿದ್ದಾರೆ.ಕಪ್ರಕುಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶರಬಣ್ಣ ರಸ್ತಾಪುರ,ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಚಟ್ಟಳ್ಳಿ,ಮಾಳಪ್ಪ ಗಂಗನಾಳ, ನಿಜಲಿಂಗಪ್ಪ ದೇಸಾಯಿ ರಾಜಾಪುರ, ರಾಯಪ್ಪ ಚೆಲುವಾದಿ,ಬಲಭೀಮ ಮಡ್ನಾಳ,ಮಲ್ಲನಗೌಡ ತಿಪ್ಪನಹಳ್ಳಿ, ದೇವೇಂದ್ರಪ್ಪ ನಿವಾಸಿ,ಶರಣಗೌಡ ಚಾಮನಾಳ ಸೇರಿದಂತೆ ಇತರರು  ಉಪಸ್ಥಿತರಿದ್ದರು.

About The Author