ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗು ಸರಕಾರಿ ನೌಕರರ ಸಂಘ ಮತ್ತು ಸಹಕಾರ ಬ್ಯಾಂಕ್ ವತಿಯಿಂದ ರಾಯಪ್ಪಗೌಡರಿಗೆ ಸನ್ಮಾನ

ಶಹಾಪುರ:ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗು ಸರಕಾರಿ ನೌಕರರ ಸಂಘ ಮತ್ತು ಸಹಕಾರ ಬ್ಯಾಂಕ್ ವತಿಯಿಂದ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ಪಡೆದ ರಾಯಪ್ಪಗೌಡ ಹುಡೇದ ಮತ್ತು  ತಹಶೀಲ ಕಾರ್ಯಾಲಯದ ವೆಂಕಟೇಶಗೆ ನೌಕರರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಲಬುರಗಿ  ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ ಉಪಾಧ್ಯಕ್ಷರಾದ ಸುರೇಶ ಸಜ್ಜನ,ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ದರ್ಶನಾಪುರ, ಜಿಲ್ಲಾ ಸಹಕಾರ ಬ್ಯಾಂಕ ನಿರ್ದೇಶಕರಾದ ಗುರುನಾಥರಡ್ಡಿ ಪಾಟೀಲ ಹಳಿಸಗರ ಬಾಪುಗೌಡ ಪಾಟೀಲ, ರೈತ ಮುಖಂಡರಾದ ಶರಣಪ್ಪ ಸಲಾದಪುರ  ಬಸವರಾಜ ಹಿರೇಮಠ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಅಳ್ಳೊಳ್ಳಿ  ರಾಜ್ಯ ಉಪಾಧ್ಯಕ್ಷರಾದ ಪಂಪಣ್ಣಗೌಡ ಪಾಟೀಲ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಭೀಮನಗೌಡ ತಳೇವಾಡ  ಬಸವರಾಜ ಯಾಳಗಿ ಶಾಂತರೆಡ್ಡಿ ತುಂಬಗಿ ಬಸನಗೌಡ ಬೆಳ್ಳಿಕಟ್ಟಿ ರಾಮನಗೌಡ ಖಾನಾಪುರ  ಮಲ್ಲೇಶಪ್ಪ ಹೊಸಮನಿ ಜ್ಯೋತಿ ಜಕರೆಡ್ಡಿ  ಚಂದ್ರಕಲಾ ಗೂಗಲ್  ಗೋಪಾಲ ಬೀಜಸಪುರ ಲಕ್ಶ್ಮಣ ಲಾಳಸೇರಿ  ಜಯಪ್ರಕಾಶ ಕುಲಕರ್ಣಿ ಸೇರಿದಂತೆ ಅನೇಕ ಜನ ನೌಕರರು ಭಾಗವಹಿಸಿದ್ದರು.

 ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕು ಸಂಘ ಶಹಾಪೂರು ವತಿಯಿಂದ ಸರ್ವೋನ್ನತ ಪ್ರಶಸ್ತಿ ಪಡೆದ ರಾಯಪ್ಪಗೌಡ ಹುಡೇದ ರವರಿಗೆ ಸನ್ಮಾನಿಸಲಾಯಿತು. ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರು ಗುಂಜಲಪ್ಪ ನಾಯಕ,ಜಿಲ್ಲಾ ಉಪಾಧ್ಯಕ್ಷರು ರಮೇಶ ರಾಠೋಡ,ವಿಜಯಕುಮಾರ್ , ಖಜಾಂಚಿ ತಾನಾಜಿ, ವೆಂಕಟೇಶ , ಮಂಜುನಾಥ ಸಿ ಮತ್ತು ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಿಗರು ಉಪಸ್ಥಿತಿಯಲ್ಲಿ ಇದ್ದರು

 

About The Author