ಸಹಕಾರ ರತ್ನ ಪುರಸ್ಕೃತ ಎಂ ನಾರಾಯಣರವರಿಗೆ ಶರಣು ಗದ್ದುಗೆಯವರಿಂದ ಸನ್ಮಾನ 

ಶಹಾಪೂರ :  ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಹಿರಿಯ ಲೆಕ್ಕಪರಿಶೋಧಕರ ಹಾಗೂ ಜಿಲ್ಲಾ ಯುನಿಯನ್ ಒಕ್ಕೂಟದ ಉಪಾಧ್ಯಕ್ಷರಾದ ಎಂ. ನಾರಾಯಣನವರಿಗೆ ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಗದ್ದುಗೆಯವರು ಹಾಗೂ ಸಹಕಾರ ಸಂಘಗಳು ಕಾರ್ಯದರ್ಶಿಗಳು ಸೇರಿ ಎಂ ನಾರಾಯಣನವರಿಗೆ ಸನ್ಮಾನಿಸಿದರು.

ಯಾದಗಿರಿ ಜಿಲ್ಲೆಗೆ ಸಹಕಾರ ರತ್ನ ನೀಡಿದ್ದು ಬಹಳ ಸಂತಸ ತಂದಿದೆ ಮತ್ತು ನಾರಾಯಣವರು ಹಲವಾರು ವರ್ಷಗಳ ಕಾಲ ಸಹಕಾರ ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ನಿವೃತ್ತ ಹೊಂದಿದ್ದರು.ಅದರೊಂದಿಗೆ ಸಹಕಾರ ಸಂಘಗಳು ಮುಖಾಂತರ ಯುನಿಯನ್ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮುಖಾಂತರ ಉಪ್ಪಾರ ಸಮಾಜಕ್ಕೆ ಸಂತಸವಾಗಿದೆ ಎಂದರು. ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ್ ಹೆಗ್ಗಣ್ಣದೊಡ್ಡಿ, ಮಾತೃಛಾಯ ಶಾಲೆಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ತಿಪ್ಪಣ್ಣ ಖ್ಯಾತನಾಳ, ಭವಾನಿ ಸಹಕಾರ ಸಂಘದ ಅಧ್ಯಕ್ಷರಾದ ರಾಜು ಪಂಚುಭಾವಿ, ಜನನಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶರಣು ಕಾಡಂಗೇರಾ, ಬಾಪುಗೌಡ ಗುಳ್ಯಾಳ ಮಲ್ಲಿಕಾರ್ಜುನ ಹುರಸಗುಂಡಗಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಇದ್ದರು.

About The Author