ಕಾಂಗ್ರೆಸ್ ಪರ ಭರ್ಜರಿ ಪ್ರಚಾರ  ಗೆಲುವು ನಮ್ಮದೇ : ಬಿಎಮ್ ಪಾಟೀಲ್.

ಬಳ್ಳಾರಿ: ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರರಾದ ಬಿಎಮ್ ಪಾಟೀಲ್ ತೆಲಂಗಾಣ ರಾಜ್ಯದಲ್ಲಿ ನಡೆದ ಕಾಂಗ್ರೆಸ್ ಪರ ಪ್ರಚಾರದಲ್ಲಿ ಪಾಲ್ಗೊಂಡು ಭರ್ಜರಿ ಪ್ರಚಾರ ನಡೆಸಿದರು.ಬಳ್ಳಾರಿ,ಯಾದಗಿರಿ, ರಾಯಚೂರು ಗಡಿ ಪ್ರದೇಶಕ್ಕೆ ಸೇರಿದ ಹಲವಾರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಬಿಎಮ್ ಪಾಟೀಲ್ ರವರು ತೆಲಾಂಗಣ ರಾಜ್ಯದಲ್ಲಿ ಈ ಸಾರಿ ಕಾಂಗ್ರೆಸ್ ಪರ ಮತದಾರರ ಒಲವಿದ್ದು ಬಿ ಆರ್ ಎಸ್ ಪಕ್ಷದ ಪರ ಜನ ಬೇಸರಗೊಂಡಿದ್ದಾರೆ ಎಂದರು.
ರಾಜ್ಯಾದ್ಯಂತ ಹಲವು ಜನೋಪಯೋಗಿ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಾಗುವುದು ಎಂದು ಪಕ್ಷದ ಪ್ರಚಾರದಲ್ಲಿ ತಿಳಿಸಿದರು. ಈ ಸಾರಿ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಆಡಳಿತ ನಡೆಸಲಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳು ಜಾರಿಗೊಳ್ಳಲಿವೆ.ಬಡವರು, ದೀನದಲಿತರಿಗೆ ಉಪಯೋಗವಾಗುವಂತಹ ಕರ್ನಾಟಕ ರಾಜ್ಯದ ಹಲವು ಯೋಜನೆಗಳನ್ನು ತೆಲಾಂಗಣದಲ್ಲಿಯೂ ಕೂಡ ಜಾರಿಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರಲಿದೆ ಎಂದರು.

About The Author