ಮಹಾಶೈವ ಧರ್ಮಪೀಠದಲ್ಲಿ 66 ನೆಯ ಶಿವೋಪಶಮನ ಕಾರ್ಯ

ರಾಯಚೂರು (ಗಬ್ಬೂರು ಅಕ್ಟೋಬರ್ 29,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 29 ರ ಆದಿತ್ಯವಾರದಂದು 66 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಮಹಾಶೈವ ಧರ್ಮಪೀಠವು ‘ ಶಿವೋಪಶಮನ’ ಎನ್ನುವ ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯ ಉಪಶಮನ ಕಾರ್ಯದಿಂದ ಪ್ರಸಿದ್ಧಿ ಪಡೆದಿದ್ದು ರಾಜ್ಯದ ಉದ್ದಗಲದಿಂದಲ್ಲದೆ ನೆರೆಯ ಆಂಧ್ರಪ್ರದೇಶ,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರುಗಳು ಮಹಾಶೈವಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.’ ವಿಜ್ಞಾನವು ಸೋತಲ್ಲಿ ಆಧ್ಯಾತ್ಮವು ಪ್ರಾರಂಭವಾಗುತ್ತದೆ’ ಎನ್ನುವ ಮಾತು ಮಹಾಶೈವ ಧರ್ಮಪೀಠದಲ್ಲಿ ಅಕ್ಷರಶಃ ನಿಜವಾಗಿದೆ.ವೈದ್ಯರುಗಳಿಂದ ಪರಿಹಾರವಾಗದ,ವೈದ್ಯರುಗಳು ಅಸಹಾಯತೆಯಿಂದ ಕೈ ಚೆಲ್ಲಿದ ಅಸಾಧ್ಯರೋಗಪೀಡಿತ ವ್ಯಕ್ತಿಗಳನೇಕರು ಶ್ರೀಕ್ಷೇತ್ರದಲ್ಲಿ ವಿಶ್ವೇಶ್ವರ ಶಿವನ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ,ಚೇತರಿಸಿಕೊಂಡು ನವಜೀವನ ನಡೆಸುತ್ತಿದ್ದಾರೆ.ಮದುವೆಯಾಗಿ ಹದಿನೆಂಟು ಇಪ್ಪತ್ತು ವರ್ಷಗಳಾಗಿ ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕರುಣಿಸಿದ್ದಾನೆ ಶಿವ ವಿಶ್ವೇಶ್ವರ.ವಿವಾಹಯೋಗ ಕೂಡಿಬರದ ಅದೆಷ್ಟೋ ತರುಣ ತರುಣಿಯರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಕಂಕಣಬಲಹೊಂದಿ ಮದುವೆಮಾಡಿಕೊಂಡು ಆನಂದದ ಜೀವನ ಸಾಗಿಸುತ್ತಿದ್ದಾರೆ.’ಜನಸಾಮಾನ್ಯರ ಮಠ’ ವೆಂದೇ ಹೆಸರಾಗಿರುವ ಮಹಾಶೈವ ಧರ್ಮಪೀಠಕ್ಕೆ ನಾಡಿನ ಮೂಲೆಮೂಲೆಗಳಿಂದ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರುಗಳ ಸಮಸ್ಯೆ- ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು.

ಮಹಾಶೈವ ಧರ್ಮಪೀಠದಲ್ಲಿ ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನೇ ಪ್ರಭುವಾಗಿದ್ದು ಪೀಠಾಧ್ಯಕ್ಷರಾಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವನ ಪ್ರತಿನಿಧಿಯಾಗಿ ಲೋಕಸಮಸ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.ಭಕ್ತರ ಸಂಕಷ್ಟವನ್ನು ಸರ್ವೇಶ್ವರ ಶಿವನೆದುರು ನಿವೇದಿಸಿಕೊಂಡು ಶಿವನಿಂದಲೇ ಭಕ್ತರ ಸಮಸ್ಯೆಗಳಿಗೆ ಪರಿಹಾರ ಪಡೆಯುವುದರಿಂದ ಇಲ್ಲಿ ಪರಿಹಾರ ಕಾಣದ ಭಕ್ತರ ಸಮಸ್ಯೆಗಳೇ ಇಲ್ಲ.ಇಪ್ಪತ್ತೊಂದು ದಿನಗಳ ಕಾಲ ಮದ್ಯಪಾನ ಮತ್ತು ಮಾಂಸಹಾರ ಸೇವನೆ ಬಿಡುವ ಒಂದೇ ಒಂದು ನಿಬಂಧನೆ ಬಿಟ್ಟರೆ ಮಹಾಶೈವ ಧರ್ಮಪೀಠದ ಭಕ್ತರುಗಳಿಗೆ ಯಾವುದೇ ಷರತ್ತುಗಳಿಲ್ಲ.

ಮಹಾಶೈವ ಧರ್ಮಪೀಠವು ಜನರ ಸಮಸ್ಯೆಗಳನ್ನು ಪರಿಹರಿಸುವ ಧಾರ್ಮಿಕ ಕೇಂದ್ರವಾಗಿರುವ ಜೊತೆಗೆ ಆತ್ಮಜಾಗೃತಿಯನ್ನುಂಟು ಮಾಡುವ ಆಧ್ಯಾತ್ಮಿಕ ಸಿದ್ಧಿಸ್ಥಾನವೂ ಹೌದು.ನಿಜವಾದ ಅರ್ಥದ ಜಾತ್ಯಾತೀತ ಮಠವಾಗಿರುವ ಮಹಾಶೈವ ಧರ್ಮಪೀಠಕ್ಕೆ ಎಲ್ಲ ಜಾತಿ ಜನಾಂಗಗಳ ಜನರು ನಡೆದುಕೊಳ್ಳುತ್ತಿದ್ದಾರೆ.ಮಹಾಶೈವ ಧರ್ಮಪೀಠದಲ್ಲಿ ‘ ಶಿವಸರ್ವೋತ್ತಮ ತತ್ತ್ವ’ ವನ್ನು ಎತ್ತಿಹಿಡಿಯುವುದರ ಜೊತೆಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮನುಷ್ಯತ್ವವನ್ನು ಎತ್ತಿಹಿಡಿಯುತ್ತಿದ್ದು ಇಲ್ಲಿ ಜಾತಿಪ್ರತಿಷ್ಠೆಗೆ,ಅರ್ಥಹೀನ ವ್ಯಕ್ತಿಪೂಜೆಗೆ ಅವಕಾಶವಿಲ್ಲ.ಹುಟ್ಟಿನಿಂದ ಶ್ರೇಷ್ಠರು ಎನ್ನುವ ಭ್ರಮಾಪೀಡಿತರುಗಳನ್ನು ಮುಕ್ಕಣ್ಣ ಕರಿಗಾರ ಅವರು ಒಪ್ಪುವುದಿಲ್ಲವಾದ್ದರಿಂದ ಮಹಾಶೈವ ಧರ್ಮಪೀಠದಲ್ಲಿ ಪಂಕ್ತಿಭೇದದಂತಹ ಅನಿಷ್ಟಪದ್ಧತಿಗಳಿಗೆ ಅವಕಾಶವಿಲ್ಲ.ಸ್ವತಃ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರೇ ಪ್ರಸಾದದ ಸಮಯದಲ್ಲಿ ಮೊದಲ ಪಂಕ್ತಿಯಲ್ಲಿ ಭಕ್ತರುಗಳೊಂದಿಗೆ ಕುಳಿತುಕೊಂಡು ಪ್ರಸಾದ ಸ್ವೀಕರಿಸುತ್ತಾರೆ.ಇಂತಹ ಹತ್ತು ಹಲವು ಅನ್ಯಾದೃಶ,ಅಪರೂಪದ ಸಂಗತಿಗಳಿಂದ ಹೆಸರಾಗಿರುವ ಮಹಾಶೈವ ಧರ್ಮಪೀಠವು ಅತಿವಿಶಿಷ್ಟ ಧಾರ್ಮಿಕ,ಆಧ್ಯಾತ್ಮಿಕ ಕೇಂದ್ರ ಎಂದು ಖ್ಯಾತಿಗೊಂಡಿದೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ, ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ. ಎನ್ ಹೆಚ್ ಪೂಜಾರ್,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ‌ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಉಮೇಶ ಸಾಹುಕಾರ ಅರಷಣಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ವೀರೇಶ ಯಾದವ,ಯಲ್ಲಪ್ಪ ಕರಿಗಾರ,ಸಿದ್ರಾಮಯ್ಯಸ್ವಾಮಿ ಹಳ್ಳಿ, ಹನುಮಂತಪ್ಪ ಪೋಲೀಸ್ ಪಾಟೀಲ್ ಮಸೀದಪುರ,ಮಲ್ಲಿಕಾರ್ಜುನ ಮೇಟಿ ,ರಂಗನಾಥ ಮಸೀದಪುರ,ಶಿವಾನಂದ ಮಸೀದಪುರ,ಪರಶುರಾಮ ಜಡೇರ, ಹನುಮೇಶ,ಬಸವರಾಜ ಹರವಿ,ತಿಪ್ಪಯ್ಯ ಭೋವಿ,ಶಿವಕುಮಾರ ವಸ್ತಾರ್ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author