ಶಹಾಪುರ ತಾಲೂಕು ಕಾನಿಪ ಸಂಘದ ಅಧ್ಯಕ್ಷರಾಗಿ ನಾರಾಯಣಾಚಾರ್ಯ ಸಗರ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಆಲೂರ ಆಯ್ಕೆ

ಶಹಾಪುರ:ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪಧಾಧಿಕಾರಿಗಳ ಆಯ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕೀನ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ತಾಲುಕಿನ ಸರ್ವ ಪತ್ರಕರ್ತರು ಹಾಜರಿದ್ದರು.ಹಿರಿಯ ಪತ್ರಕರ್ತರಾದ ನಾರಾಯಣಚಾರ್ಯ ಸಗರ ರವರನ್ನು ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಆಲೂರ ರವರನ್ನು ಆಯ್ಕೆ ಮಾಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ ರವರು ಪರಸ್ಪರ ಸಹಕಾರ ಮನೋಭಾವನೆಗಳನ್ನು ಬೆಳಸಿಕೊಂಡು ಸೌಹಾರ್ಧತೆಯ ನೆಲೆಗಟ್ಟಿನ ಮೇಲೆ ಸಂಘದ ಶಕ್ತಿಯನ್ನು ವೃದ್ದಿಗೊಳಿಸಬೇಕು. ಸಮಾನ ಮನಸ್ಸಿನಿಂದ ಸರ್ವರನ್ನು ಕರೆದುಕೊಂಡು ಮುನ್ನಡೆಯಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಪಧಾಧಿಕಾರಿಗಳನ್ನು ಗೌರವಿಸಲಾಯಿತು.ಮುಖ್ಯ ಅಥಿತಿಗಳಾಗಿ ಜಿಲ್ಲಾ ಉಪಾಧ್ಯಕ್ಷರಾದ ರಾಜು ನಲ್ಲಿಕರ್. ಕೋಶಾಧ್ಯಕ್ಷತೆರಾದ ಕುಮಾರಸ್ವಾಮಿ ಕಲಾಲ ಸಿದ್ದಣ್ಣ ಲಿಂಗೇರಿ ಆಗಮಿಸಿದ್ದರು.ನೂತನ ಪಧಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ನಾರಾಯಣಚಾರ್ಯ ಸಗರ [ಅಧ್ಯಕ್ಷರು] ಮಲ್ಲಿಕಾರ್ಜುನ ಮುದನೂರ [ಗೌರವಾಧ್ಯಕ್ಷರು] ಮುಕ್ತಿಯಾರ ಅಹಮ್ಮದ್ [ಉಪಾಧ್ಯಕ್ಷರು] ವೆಂಕಟೇಶ ಆಲೂರ [ಪ್ರಧಾನಕಾರ್ಯದರ್ಶಿ.] ಮಹೇಶ ಪತ್ತಾರ [ಸಹ ಕಾರ್ಯದರ್ಶಿ] ಕೊಶಾಧ್ಯಕ್ಷರಾಗಿ ರಾಜು ಗುತ್ತೆದಾರವರು ಅವಿರೋಧವಾಗಿ ಆಯ್ಕೆಯಾದರು. ಹಿರಿಯ ಪತ್ರಕರ್ತರಾದ ಟಿ ನಾಗೇಂದ್ರ ಪ್ರಹ್ಲದರಾವ್ ತಿಳಗೂಳ.ಈರಣ್ಣ ಹಾದಿಮನಿ ಅಮರೇಶ ಹಿರೆಮಠ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಈರಣ್ಣ ಮೌರ್ಯ ಮತ್ತು ಮಂಜುನಾಥ ಬಿರೆದಾರ ನಾಗೇಂದ್ರಸಿAಗ್ ಠಾಕೋರ್ ಬಸವರಾಜ ಕರೆಗಾರ ಚಂದ್ರಶೇಖರ ಕಟ್ಟಿಮನಿ ಬಸವರಾಜ ಸಿನ್ನೂರ ಚೆನ್ನಬಸವ ದೊಡಮನಿ ಅಜಯ ಯಳಸಂಗಿಕರ್ ಲಕ್ಷಣ ರಸ್ತಾಪುರ ಸೇರಿದಂತೆ ಪತ್ರಕರ್ತ ಮಿತ್ರರು ಎದ್ದರು.

About The Author