ರಸ್ತಾಪುರದಲ್ಲಿ ಕುರಿಭವನ ನಿರ್ಮಾಣಕ್ಕೆ ಮನವಿ

ಶಹಾಪುರ : ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾಹಿಗಳಿದ್ದು ಶೈಕ್ಷಣಿಕ ಮತ್ತು ಧಾರ್ಮಿಕ ಸಾಮಾಜಿಕ ದೃಷ್ಟಿಕೋನದಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷರಾದ ಶರಬಣ್ಣ ರಸ್ತಾಪುರ ನೇತೃತ್ವದಲ್ಲಿ ಕುರಿಗಾರರು ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಪಶು ಆಸ್ಪತ್ರೆಯ ಆವರಣದಲ್ಲಿ  ನಡೆದ ಸಂಚಾರಿ ಕುರಿಗಾರರಿಗೆ ಸಚಿವರು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಶರಬಣ್ಣ ರಸ್ತಾಪುರ ಮಾತನಾಡಿ,ರಸ್ತಾಪುರ ಜಿಲ್ಲಾ ಪಂಚಾಯಿತಿಯ ಕೇಂದ್ರವಾಗುತ್ತಿದ್ದು, ಹಿಂದುಳಿದ ಕುರಿಗಾರರ ಶೈಕ್ಷಣಿಕ, ಧಾರ್ಮಿಕ ದೃಷ್ಟಿಯಿಂದ ಸಮುದಾಯ ಭವನದ ಅವಶ್ಯಕತೆ ಇದೆ. ಈಗಾಗಲೇ ಶಹಾಪುರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರದ ಮುಖಾಂತರ ಮನವಿ ಸಲ್ಲಿಸಿದ್ದು, ತಾವು ಇದಕ್ಕೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿಸಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

About The Author