ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ (ಯೂನಿಯನ್‌) ಸಮಿತಿಯ ರಾಜ್ಯ ಘಟಕ ಕಾರ್ಯಧ್ಯಕ್ಷರಾಗಿ ಮಲ್ಲನಗೌಡ ನೇಮಕ !

ಶಹಾಪುರ : ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ಸಮಿತಿ ಯೂನಿಯನ್ ನ ಕಲ್ಯಾಣ ಕರ್ನಾಟಕದ ವಿಭಾಗೀಯ ಕಾರ್ಯಾಧ್ಯಕ್ಷರಾಗಿ,ಸಂಘಟನೆಯ ಕಾರ್ಯ ಚಟುವಟಿಕೆ ನಡೆಸಿತಿದ್ದು, ದಿನನಿತ್ಯ ಸಂಘಟನೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸಿ, ಸಂಘಟನೆಯಿಂದ ಕಾರ್ಮಿಕ ಇಲಾಖೆಯಲ್ಲಿ ಬರುವ ಸೌಲಭ್ಯಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೋಂದಣಿ ಆದ ಕಾರ್ಮಿಕರಿಗೆ ಕಾರ್ಮಿಕರ ಸವಲತ್ತುಗಳನ್ನು ಕೊಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಸಂಘಟನೆಯನ್ನು ಬೆಳೆಸುವಲ್ಲಿ ಮುಖ್ಯ ಪಾತ್ರರಾಗಿದ್ದಾರೆ. ಆದ ಕಾರಣ ಇವರನ್ನು ಹೆಚ್ಚಿನ ಜವಾಬ್ದಾರಿವಹಿಸಿ ಇವರ ಕಾರ್ಯ ಚಟುವಟಿಕೆ ಮೆಚ್ಚಿ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ಮಾಡುತ್ತಿದ್ದೇನೆ ಎಂದು ರಾಜ್ಯಾಧ್ಯಕ್ಷರಾದ ಡಿ ಸಿ ಪಾಪಣ್ಣನವರು ತಿಳಿಸಿದ್ದು, ನವಂಬರ್ 1 ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆದೇಶ ಪತ್ರವನ್ನು ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ನೀಡಲಾಗುವುದೆಂದು ಡಿ ಸಿ ಪಾಪಣ್ಣ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರು ಕರ್ನಾಟಕ ಕಲ್ಯಾಣ ಮಂಡಳಿ ಮಾಜಿ ಸದಸ್ಯರು ತಿಳಿಸಿದ್ದಾರೆ ಎಂದು ಮಲ್ಲಣ್ಣಗೌಡ ರಾಯಚೂರ ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಿಗೆ ಮಲ್ಲನಗೌಡರು ಅಭಿನಂದನೆ ಸಲ್ಲಿಸಿದರು.

About The Author