ಶಹಪುರದಲ್ಲಿ ಗಣೇಶ ವಿಸರ್ಜನೆ ಬೃಹತ್ ಶೋಭಾ ಯಾತ್ರೆ : ಹಿಂದುಗಳ ರಕ್ಷಣೆಗಾಗಿ ನಾವು ಸದಾ ಸಿದ್ಧ : ಬಸವರಾಜ ಪಾಟೀಲ್ ಯತ್ನಾಳ್

ಶಹಾಪುರ : ರಾಜ್ಯದಲ್ಲಿ ಹಿಂದುಗಳ ರಕ್ಷಣೆಗಾಗಿ ನಾವು ಯಾವತ್ತಿಗೂ ಸದಾ ಸಿದ್ಧ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಶಾಸಕರಾದ ಬಸವರಾಜ್ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಶಿವಮೊಗ್ಗ ಘಟನೆಯನ್ನು ಖಂಡಿಸಿದ ಅವರು ಶಿವಮೊಗ್ಗದಲ್ಲಿ  ಅನಾವಶ್ಯಕವಾಗಿ ಹಿಂದುಗಳ ಮೇಲೆ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ನರಸತ್ತ ಗ್ರಹ ಮಂತ್ರಿಗಳಿದ್ದಾರೆ, ಶಿವಮೊಗ್ಗದಲ್ಲಿರುವ ಮುಸ್ಲಿಮರು ತಮ್ಮ ಮನೆಯಲ್ಲಿರುವ ಸಂಗ್ರಹಿಸಿಟ್ಟುಕೊಂಡಿರುವ ಅಸ್ತ್ರಗಳನ್ನು ಹೊರತೆಗೆಯಬೇಕು.ಇಲ್ಲದಿದ್ದರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ ಎಂದರು. ಇಂದು ನಗರದಲ್ಲಿ  ಹಿಂದೂ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಬಸವೇಶ್ವರ ವೃತ್ತದಲ್ಲಿ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸನಾತನ ಧರ್ಮ ಡಾ. ಅಂಬೇಡ್ಕರ್ ಬರೆದ ಸಂವಿಧಾನ ಸೂರ್ಯ ಚಂದ್ರ ಇರುವವರಿಗೆ ಇರುತ್ತದೆ. ಇದನ್ನು   ರಾಜ್ಯಸಭೆಗಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಆಂದೋಲನದ ಶ್ರೀಗಳಾದ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಕೆಣಕಿದರೆ ರಾಜ್ಯದಲ್ಲಿರುವ ಯಾವ ಹಿಂದೂ ಕಾರ್ಯಕರ್ತರು ಸುಮ್ಮನಿರುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರೊ ದೋ ತುಕುಡಾ, ಹಿಂದುಗಳ ಮೇಲೆ ಹಲ್ಲೆಯಾದರೆ ರಾಜ್ಯದಲ್ಲಿ ಮತ್ತೆ ಗೋದ್ರಾ ಘಟನೆಯಾಗುತ್ತದೆ. ಶಹಪುರ ನಗರವನ್ನು ಮುಸ್ಲಿಮರ ನಗರವೆಂದುಕೊಂಡು ಭಾವಿಸಿದ್ದರೆ ಅದು ತಪ್ಪು. ಇವೆಲ್ಲವೂ ನಡೆಯುವುದಿಲ್ಲ ಎಂದು ಆಕ್ರೋಷಭರಿತರಾಗಿ ಮಾತನಾಡಿದರು.

ನಗರದಲ್ಲಿ ಸುಮಾರು ನಾಲ್ಕು ತಾಸಿಗೂ ಹೆಚ್ಚು ಕಾಲ ಗಣೇಶ ವಿಸರ್ಜನೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಸಾವಿರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.ಸುಭೇದಾರ ಆಸ್ಪತ್ರೆಯಿಂದ ಬಸವೇಶ್ವರನಗರದ ವಿವಿಧ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅಮೀನರೆಡ್ಡಿ ಪಾಟೀಲ,ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ವಿಭೂತಿಹಳ್ಳಿ, ಶಿವರಾಜ ದೇಶಮುಖ್ ಕರಣ್ ಸುಬೇದಾರ ಉಪಸ್ಥಿತರಿದ್ದರು.

 

About The Author