ಸಚಿವ ದರ್ಶನಾಪುರ ರಿಂದ ರಾಷ್ಟ್ರೀಯ ಕುರುಬರ ಜಾಗೃತಿ ಸಮಾವೇಶದ ಬಿತ್ತಿ ಪತ್ರಗಳ ಅನಾವರಣ

yadagiri ಶಹಾಪುರ : ಅಕ್ಟೋಬರ್ 2 ಮತ್ತು  3 ರಂದು ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ 9ನೇ ವಾರ್ಷಿಕೋತ್ಸವ ಹಾಗು ಕುರುಬರ ರಾಷ್ಟ್ರೀಯ ಬೃಹತ್ ಜಾಗೃತಿ ಸಮಾವೇಶದ ಬಿತ್ತಿ ಪತ್ರಗಳನ್ನು ಶಹಾಪುರದಲ್ಲಿ ರಾಜ್ಯದ ಸಣ್ಣ ಕೈಗಾರಿಕೆ ಸಚಿವರು ಯಾದಗಿರಿ ಜಿಲ್ಲಾ ಉಸ್ತುವಾರಿಗಳಾದ ಶರಣಬಸಪ್ಪಗೌಡ ದರ್ಶನಾಪುರ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು

ರಾಜ್ಯದ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದ್ದು ಸಂತಸದ ವಿಷಯ.  ರಾಷ್ಟ್ರೀಯ ಕುರುಬ ಸಮಾಜದ ಬೃಹತ್ ಜಾಗೃತಿ ಸಮಾವೇಶವಿದ್ದು, ಈ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಯಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಿ. ನಾನು ನಿಮ್ಮ ಸಮಾಜದ ಜೊತೆಗೆ ಯಾವಾಗಲೂ ಇರುತ್ತೇನೆ.  ಹಾಲುಮತ ಸಮಾಜ ಸಂಸ್ಕೃತಿ ಅತ್ಯಂತ ಪವಿತ್ರವಾದದ್ದು. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ  ಹೇಳಿದರು.

ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ವಿನೋದ್ ಗೌಡ ಮಾಲಿಪಾಟೀಲ್ ಮಾತನಾಡಿ,ಈ ಸಮಾರಂಭವು  ನಮ್ಮ ಸಮಾಜದ ಹಿರಿಯ ಮುಖಂಡರುಗಳಾದ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಮಾಜಿ ಸಚಿವರಾದ ಎಚ್.ಎಮ್ ರೇವಣ್ಣನವರ ನೇತೃತ್ವದಲ್ಲಿ  ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯಗಳಿಂದ ಸಮಾಜದ ಬಂಧುಗಳು  ಗಣ್ಯ ವ್ಯಕ್ತಿಗಳು ರಾಜಕೀಯ ಮುಖಂಡರು ಸಿದ್ದರಾಮಯ್ಯನವರ ಅಭಿಮಾನಿಗಳು ಆಗಮಿಸಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದು ಯಾದಗಿರಿ ಜಿಲ್ಲೆಯ ಸಮಾಜದ ಹಿರಿಯ ಮುಖಂಡರುಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ  ಕುರುಬ ಸಂಘದ  ತಾಲೂಕು ಪ್ರಧಾನ ಕಾರ್ಯದರ್ಶಿ ಶರಬಣ್ಣ ರಸ್ತಾಪುರ, ಬಲಭೀಮ ಮಡ್ನಾಳ,ರಾಯಣ್ಣ ಯುವಪಡೆ ತಾಲೂಕು ಅಧ್ಯಕ್ಷ ರಾಯಪ್ಪ ಚಲವಾದಿ,ಕುರುಬ ಸಂಘದ ನಿರ್ದೇಶಕರಾದ ಮಾಳಪ್ಪ ಹಳಿಸಗರ, ಸಚಿವರ ಆಪ್ತ ಸಹಾಯಕರಾದ ಶಿವಶರಣು ಇಟಗಿ,ಮಲ್ಲಣಗೌಡ ತಿಪ್ಪನಾಳ,ಯಲ್ಲಪ್ಪ ಹಾಗೂ ಇನ್ನಿತರರು ಇದ್ದರು.

About The Author