ಮಹಮ್ಮದ್ ಪೈಗಂಬರರ ತತ್ವಾದರ್ಶಗಳನ್ನು ಪಾಲಿಸಿ : ವಿನೋದ್ ಪಾಟೀಲ್

yadagiri ವಡಗೇರಾ : ಪ್ರವಾದಿ ಮಹಮ್ಮದ್ ಪೈಗಂಬರ್ ನ್ಯಾಯ ನೀತಿ ಸತ್ಯ ಮಾರ್ಗದಲ್ಲಿ ನಾವುಗಳು ನಡೆದು ಎಲ್ಲಾ ಜಾತಿ ಜನಾಂಗದವರು ಒಗ್ಗೂಡಿ ಸೌಹಾರ್ದತೆಯಿಂದ ಬಾಳಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದ್  ಪಾಟೀಲ್ ಹೇಳಿದರು. ಮಹಮ್ಮದ್ ಪೈಗಂಬರರ ಜನ್ಮದಿನದ ನಿಮಿತ್ಯ ದೋರನಹಳ್ಳಿ ಗ್ರಾಮದ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಈದ್ ಮಿಲಾದ್ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಾದಿಗಳು ಮನುಕುಲಕ್ಕೆ ಒಳ್ಳೆಯದನ್ನು ಮಾಡಿ ಎಂದು ಹೇಳಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವುಗಳು ನಡೆಯಬೇಕು.ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಇಂದು ನಾವು ಎಲ್ಲಾ ಧರ್ಮಗಳೊಂದಿಗೆ ಜಾತಿ  ಮೀರಿದ ಶಾಂತಿ ಸೌಹಾರ್ದತೆಯಿಂದ ಬಾಳಕಬೇಕಾಗಿದೆ ಎಂದರು.ಮೇಕ್ಕ ಮದೀನಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಶರಣು ಗದ್ದುಗೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ,ಆರಿಫ್ ಮಠ ತಾಯಮ್ಮ ಶಹಾಪುರ ಶಂಕ್ರಪ್ಪ ಶಾಣೆನೂರ್ ಅಬ್ದುಲ್ ಭಾಷಾ ಶರಣು ದೋರನಹಳ್ಳಿ ರಾಜಾಮೈನುದ್ದೀನ್ ಜಮಾದಾರ್ ಯಲ್ಲಪ್ಪ ಹುಡೆದ ಖಾದರ್ ಜಮಾದಾರ ಹಣಮಂತ ಶಹಾಪುರ ಇನ್ನಿತರರು ಇದ್ದರು.

About The Author