ಬೆಳಗಾವಿಯ ಅಂತರಾಷ್ಟ್ರೀಯ ಶಫರ್ಡ್ ಇಂಡಿಯಾ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವಂತೆ ಶರಬಣ್ಣ ರಸ್ತಾಪುರ ಮನವಿ

ಶಹಾಪುರ: ಶಹಾಪುರ ತಾಲೂಕಿನಿಂದ ಬೆಳಗಾವಿಯಲ್ಲಿ ನಡೆಯುವ ಶಫರ್ಡ್ ಇಂಡಿಯಾ ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಶಹಪುರ ತಾಲೂಕಿನಿಂದ ಅತಿ ಹೆಚ್ಚು ಕುರುಬ ಸಮಾಜದವರು ಸ್ವಯಿಚ್ಛೆಯಿಂದ ಪಾಲ್ಗೊಳ್ಳುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಶಹಾಪುರ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶರಬಣ್ಣ ರಸ್ತಪೂರ ಮನವಿ ಮಾಡಿದರು.

ಬಲಭೀಮ ಮಡ್ನಾಳ ಖಜಾಂಚಿ
ಕರ್ನಾಟಕ ಪ್ರದೇಶ‌ ಕುರುಬರ ಸಂಘ ಶಹಾಪುರ

ದೇಶದಲ್ಲಿ 12 ಕೋಟಿ ಕುರುಬರಿದ್ದು ದೇಶದ ಹಲವು ರಾಜ್ಯಗಳಲ್ಲಿ ತಮ್ಮದೇ ಆದ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕುರುಬ, ಮಹಾರಾಷ್ಟ್ರದಲ್ಲಿ ಧನಗರ್, ತಮಿಳುನಲ್ಲಿ ಕುರುಮ್ ಹೀಗೆ ಜಮ್ಮು ಕಾಶ್ಮೀರದಿಡಿದು ಕನ್ಯಾಕುಮಾರಿಯವರೆಗೆ ಕುರುಬ ಸಮಾಜದವರಿದ್ದು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಶಫರ್ಡ ಇಂಡಿಯಾ ಅಂತರಾಷ್ಟ್ರೀಯ ಒಕ್ಕೂಟ ಮಾಡುತ್ತಿದ್ದು, ಅಕ್ಟೋಬರ್ ಎರಡು ಮತ್ತು ಮೂರರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶ ವಿದೇಶಗಳ ಜನರು ದೇಶದ ಪ್ರಮುಖ ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಅಕ್ಟೋಬರ 3ರಂದು ಬೃಹತ್ ಸಮಾವೇಶವಿದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತರಾಷ್ಟ್ರೀಯ ಸನ್ಮಾನ ಕಾರ್ಯಕ್ರಮವಿದೆ. ಲಕ್ಷಾನುಗಟ್ಟಲೆ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಕರ್ನಾಟಕ ಪ್ರದೇಶ ತಾಲೂಕು ಕುರುಬ ಸಮಾಜದ ಕಾರ್ಯಧ್ಯಕ್ಷರಾದ ಸಿದ್ದಣ್ಣ ಕನ್ಯಾಕೋಳೂರು, ಉಪಾಧ್ಯಕ್ಷರಾದ ದೇವೇಂದ್ರಪ್ಪ ನಾಶಿ, ಮಲ್ಲಣ್ಣ ಹುರುಸಗುಂಡಗಿ, ಉಪ ಕಾರ್ಯದರ್ಶಿಗಳಾದ ಶರಣಗೌಡ ಚಾಮನಾಳ, ಖಜಾಂಚಿಯಾದ ಬಲಭೀಮ ಮಡ್ನಾಳ ಸೇರಿದಂತೆ ಇತರರು ಇದ್ದರು.

About The Author