ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದ ಶಿವ ದುರ್ಗಾ ದೇವಸ್ಥಾನಗಳ ಗೋಪುರಗಳಿಗೆ ಬಣ್ಣಬಳಿಯುವ ಸೇವೆ ಸಲ್ಲಿಸಿದವರಿಗೆ ಶಿವಾನುಗ್ರಹಪೂರ್ವಕ ಸನ್ಮಾನ.

Raichur ದೇವದುರ್ಗ( ಗಬ್ಬೂರು ಸೇ.21 ) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿ ದೇವಸ್ಥಾನಗಳ ಗೋಪುರಗಳಿಗೆ ಶಕ್ತಿನಗರದ ಕ್ಲಾಸ್ ಒನ್ ಗುತ್ತೇದಾರರಾಗಿದ್ದ ಸಿದ್ಧನಗೌಡರು ಬಣ್ಣಬಳಿಸುವ ಸೇವಾ ಕೈಂಕರ್ಯವನ್ನು ಒಪ್ಪಿ ನಿರ್ವಹಿಸಿದ್ದರು.ಆ ಪ್ರಯುಕ್ತ ಸೆಪ್ಟೆಂಬರ್ 21 ರ ಗುರುವಾರದಂದು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹಪೂರ್ವಕವಾಗಿ ಅವರನ್ನು ಸನ್ಮಾನಿಸಿದರು. ಮಹಾಶೈವ ಧರ್ಮಪೀಠದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಖಾಜನಗೌಡ ಅಬ್ಕಾರಿ ಮತ್ತು ದೇವಾಲಯಗಳ ಗೋಪುರಗಳಿಗೆ ಬಣ್ಣ ಬಳಿದ ತಂಡದ ಮುಖ್ಯಸ್ಥರಾದ ಸುರೇಶ ಶಿಲ್ಪಿ ಅವರನ್ನು ಸಹ ಪೀಠಾಧ್ಯಕ್ಷರು ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಉಮೇಶ ಸಾಹುಕಾರ ಅರಷಣಗಿ,ಬಾಬುಗೌಡ ಯಾದವ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ವೀರೇಶ ಯಾದವ,ಮೃತ್ಯುಂಜಯ ಯಾದವ,ನಾಗೇಶ ಜೇಗರಕಲ್ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author