ರಾಯರ ದರ್ಶನ ಪಡೆದ ಭಾರತಿ.ಎಸ್.ದರ್ಶನಾಪುರ : ಅಧಿಕ ಮಾಸದ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ

ಶಹಾಪುರ :  ನಗರದ ಹಳೆಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದ್ದ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಧರ್ಮಪತ್ನಿ ಭಾರತಿ.ಎಸ್.ದರ್ಶನಾಪುರ ಅವರಿಗೆ ಶ್ರೀ ಲಕ್ಷ್ಮಿ ಚಂದ್ರಲಾಂಬ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಸನ್ಮಾನಿಸಿ ಗೌರವಿಸಿದರು.
       ಈ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡ ಭಾರತಿ.ಎಸ್.ದರ್ಶನಾಪುರ ಅವರು, ದೇವರ ಆಶೀರ್ವಾದ ಮತ್ತು ಸಮಸ್ತ ತಾಲೂಕಿನ ಜನತೆಯ ಪ್ರೀತಿ,ವಿಶ್ವಾಸ,ಹಾರೈಕೆಯಿಂದ ನಮ್ಮ ಯಜಮಾನರಿಗೆ ಮಂತ್ರಿ ಸ್ಥಾನದ ಅವಕಾಶ ದೊರಕಿದ್ದು, ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ಮತ್ತು ಮೂಲಭೂತ ಸೌಕರ್ಯ ಎಲ್ಲರಿಗೂ ಸಿಗಬೇಕು ಇದು ನಮ್ಮೆಲ್ಲರ ಆಶಯವಾಗಿದೆ, ಸರ್ಕಾರದ  ಯೋಜನೆಗಳನ್ನು ಸಾರ್ಥಕವಾಗಿ ಪಡೆದುಕೊಳ್ಳಬೇಕು, ಸಮಸ್ತ ಜನತೆಯ ಕಲ್ಯಾಣ ಬಯಸುವ ಧಾರ್ಮಿಕ ಕಾರ್ಯದಿಂದ ನೆಮ್ಮದಿ ದೊರೆಯಲಿ, ಮಹಿಳಾ ಸಹೋದರಿಯರು ಪ್ರತಿಯೊಂದು ರಂಗದಲ್ಲಿ ಮುಂದೆ ಬರಬೇಕು ನಿಮ್ಮೆಲ್ಲರ ಅಭಿಮಾನ ಮರೆಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಸಮಸ್ತ ಹಳೆಪೇಟೆಯ ಮಹಿಳಾ ಸದಸ್ಯೆಯರು ಇದ್ದರು.

About The Author