ರಾಹುಲ್ ಗಾಂಧಿ ಪರ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಮೌನ ಪ್ರತಿಭಟನೆ

ಯಾದಗಿರಿ : ರಾಹುಲ್ ಗಾಂಧಿಯವರ ವಿರುದ್ಧ ಕೇಂದ್ರ ಬಿಜೆಪಿ ಸರಕಾರ  ರಾಜಕೀಯ ಪಿತೂರಿ ಮಾಡುತ್ತಿದ್ದು, ಅದನ್ನು ಖಂಡಿಸಿ ಯಾದಗಿರಿ ನಗರದ ಗಾಂಧಿ ವೃತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ  ಬಸರೆಡ್ಡಿ ಅನಪೂರ ಸೇರಿದಂತೆ ವಡಗೇರಾ ತಾಲೂಕಿನ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಸರೆಡ್ಡಿ ಅನಪುರ ಮಾತನಾಡಿ, ಬಿಜೆಪಿ ಪಕ್ಷದ ಕುತಂತ್ರದಿಂದ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ  ಅಮಾನತು ಗೊಳಿಸಿದ್ದಾರೆ.ದೇಶದೆಲ್ಲೆಡೆ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ ನಾಯಕ ಮರಿಗೌಡ ಹುಲ್ಕಲ ಎಸಿ ಕಾಡ್ಲೂರ ಶರಣಪ್ಪ ಸಲಾದಪುರ  ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ಗೂಳಿ ಚಿದಾನಂದಪ್ಪ ಕಾಳ ಬೆಳಗುಂದಿ ಮಲ್ಲಣ್ಣ ದಾಸನಕೆರಿ ನಿರಂಜನ್ ರೆಡ್ಡಿ ಬಸವರಾಜ ಅತ್ನೂರು, ಶ್ರೇಣಿಕುಮಾರ ದೂಕಾ ಸಿದ್ದಲಿಂಗರೆಡ್ಡಿ ಉಳ್ಳೆಸೂಗುರ ಸನ್ನಿಗೌಡ ತುನ್ನೂರ ಹಣಮೇಗೌಡ ಮರ್ಕಲ ಬಾಷುಮಿಯಾ ನಾಯ್ಕೋಡಿ ವಿಶ್ವನಾಥ ನೀಲಹಳ್ಳಿ ಸುರೇಶ ಜೈನ ಶರಣಪ್ಪ ಮಾನೇಗಾರ ಸ್ಯಾಮ್ಸನ್ ಮಾಳಿಕೇರಿ ಶಾಂತರೆಡ್ಡಿ ದೇಸಾಯಿ  ಸಿದ್ದರಾಮಪ್ಪ ಅರೀಕೇರ ಬಸುಗೌಡ ಬಿಳಾರ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮರಿಲಿಂಗಪ್ಪ ಸಾಹುಕಾರ ಕುಮನೂರ ಭೀಮರಾಯ ಠಾಣಗುಂದಿ ಎನಎಸ್ಯುಐ ಜಿಲ್ಲಾಧ್ಯಕ್ಷ ಹೊನ್ನೇಶ್ ಬಳಿಚಕ್ರ ಸುರೇಶ್ ಮಡ್ಡಿ ದೇವೇಂದ್ರಪ್ಪ ಬಸವರಾಜ ನೀಲಹಳ್ಳಿ ಸೋಮಶೇಖರ್ ಸಾಹುಕಾರ ಮಸ್ಕನಹಳ್ಳಿ ಬಸವರಾಜ ಕಾವಲಿ ಲಕ್ಷ್ಮಣ್ ಅರಿಕೇರಾ ತಿಮ್ಮಣ್ಣ ಬನ್ನಪ್ಪ ಮೈಲಾಪುರ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು  ಉಪಸ್ಥಿತರಿದ್ದರು.

About The Author