ವಿಕೆಂಡ್ ವಿತ್ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಅತಿಥಿಯಾಗಿ ನೋಡಲು ಬಯಸುತ್ತೇನೆ ಡಾ.ಕೃಷ್ಣಮೂರ್ತಿ ಅಭಿಮತ

ಯಾದಗಿರಿ : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಕಲರ್ಸ್ ಟಿವಿಯಲ್ಲಿ ಬರುವ  ವೀಕೆಂಡ್ ವಿತ್ ರಮೇಶ್ ರವರು ನಡೆಸಿಕೊಡುತ್ತಿರುವ ಕಾರ್ಯಕ್ರಮದಲ್ಲಿ ಅತಿಥಿಗಳನ್ನಾಗಿ ನೋಡಲು ಬಯಸುತ್ತೇವೆ ಎಂದು ಯಾದಗಿರಿ ಜಿಲ್ಲಾ ವೈದ್ಯ ಘಟಕದ ಕೆಪಿಸಿಸಿ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಅವರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.
****
ಜನಸೇವೆಯಲ್ಲಿ ಅಪಾರ ಸೇವೆಗೈದ ಖರ್ಗೆಜಿಯವರು ಎ ಐ ಸಿ ಸಿ ಅಧ್ಯಕ್ಷರಾದ ಅವರ ಜೀವನವೇ ಒಂದು ಹೋರಾಟದ ಹಾದಿ. ಯಾವುದೇ ಹಿನ್ನೆಲೆ ಇಲ್ಲದೆ ರಾಜಕೀಯವಾಗಿ ಬೆಳೆದು ಬಂದ ಒಬ್ಬ ಧೀಮಂತ ನಾಯಕ. ನನ್ನನ್ನು ಯಾವ ಕಾಲಕ್ಕೂ ದಲಿತ ನಾಯಕನನ್ನಾಗಿ ಗುರುತಿಸಬೇಡಿ .ನಾನು ಜನಸೇವೆ ಮಾಡಿದ ನಾಯಕ.ಜನರ ನಾಯಕ.ಕಾಂಗ್ರೆಸ್ ಪಕ್ಷದ ಜನನಾಯಕ ಎಂದು ಗುರುತಿಸಿ ಎಂದು ಪದೇ ಪದೇ ಹೇಳುತ್ತಿದ್ದರು ಎಂದು ಹೇಳಿದರು.
****
ಗುರುಮಿಟ್ಕಲ್ ಕ್ಷೇತ್ರದಿಂದ 9 ಬಾರಿ ಶಾಸಕರಾಗಿ ಸ್ಪರ್ಧಿಸಿ ಹಲವಾರು ಜನ ಸೇವೆಗೈದ ರಾಜ್ಯದ ಜನತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಗೈದ ಜನನಾಯಕರು. 80 ವರ್ಷದ ಅವರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯು ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನವನ್ನು ಕೊಟ್ಟರೂ  ಜವಾಬ್ದಾರಿಯಿಂಧ ಮಾಡಿಕೊಂಡ ಬಂದಿರುವ ವ್ಯಕ್ತಿ. ಅಭಿವೃದ್ಧಿಯೇ ಅವರ ಜೀವಾಳವಾಗಿತ್ತು. ಯಾವ ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷದಲ್ಲಿ ಬೇಡಲಿಲ್ಲ. ಅವರ ಆದರ್ಶಗಳೇ ಕೆಲವು ಸ್ಥಾನಮಾನಗಳು ಅವರನ್ನು ಗುರುತಿಸಿದವು ಎಂದು ಹೇಳಿದರು.ಮಲ್ಲಿಕಾರ್ಜುನ ಖರ್ಗೆ ಇವರು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು.
ಡಾ.ಕೃಷ್ಣಮೂರ್ತಿ
ಯಾದಗಿರಿ ಜಿಲ್ಲಾ ವೈದ್ಯ ಘಟಕದ ಕೆಪಿಸಿಸಿ ಅಧ್ಯಕ್ಷರು

About The Author