ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವಾದ ಮಾಡಿ : ಭಾರತಿ ದರ್ಶನಾಪುರ

ಕೆಂಭಾವಿ  : ಶಹಾಪೂರ ಕ್ಷೇತ್ರದ ಅಭಿವೃದ್ಧಿ ಹಾಗೂ ಕೆಂಭಾವಿ ಪಟ್ಟಣದ ಅಭಿವೃದ್ದಿಗಾಗಿ ಮತ್ತೊಮ್ಮೆ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ರವರನ್ನು ಶಾಸಕರನ್ನಾಗಿ ಮಾಡುವಂತೆ ಶಾಸಕ ಶರಣಬಸಪ್ಪಗೌಡ ದರ್ಶನಪುರ ಪತ್ನಿಯಾದ ಶ್ರೀಮತಿ ಭಾರತಿ ದರ್ಶನಾಪುರ ಮನವಿ ಮಾಡಿದರು.ಇಂದು ಕೆಂಭಾವಿ ಪಟ್ಟಣದ ವಾರ್ಡ್ ನಂ 01 ಮತ್ತು 02 ರಲ್ಲಿ ಕಾಂಗ್ರೆಸ್ ಪಕ್ಷದ ಪರ ಅಭ್ಯರ್ಥಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ  ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.

 

ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಅವರು ಕಳೆದ ಐದು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ  ಕಾಮಗಾರಿಗಳು ಕೈಗೊಂಡಿದ್ದು.
ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಜನಸೇವೆ ಮಾಡಿದ್ದಾರೆ.ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಕೋರಿದರು.

ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಲಭ್ಯವಾಗಲಿಲ್ಲ.ಆದಾಗ್ಯೂ ಶಾಸಕರು ಈ ಭಾಗದಲ್ಲಿ ಅವಿರತ ಶ್ರಮವಹಿಸಿ ತಾವೇ ಖುದ್ದಾಗಿ ಇಲಾಖೆಗಳಿಗೆ ಅಲೆದಾಡಿ ಅನುದಾನ ಬಿಡುಗಡೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ.ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಅಲೆ ಸೃಷ್ಟಿಯಾಗಿದ್ದು, ತಾವುಗಳು ಆಶೀರ್ವಾದಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಂಭಾವಿ ಹಾಗೂ ಶಹಾಪುರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂದು  ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ರಕ್ಷಿತಾ, ಸಮೀತಾ ಪಾಟೀಲ್, ಸರಸ್ವತಿ ಬಿರಾದಾರ, ರೇಣುಕಾ ಚಟ್ರಕಿ, ನಿರ್ಮಲಾ ಉಪ್ಪಿನ್, ಶರಣಮ್ಮ, ಮಹೇಶ ಹೊಸಕೇರಾ, ಸಂಗಮ್ಮ ಶೆಟ್ಟರ, ಪಾರ್ವತಿ, ವರ್ಷ, ಅನಿತಾ, ಖಮರೊನ್, ರಾಜೇಶ್ವರಿ ಚನ್ನೂರ, ಸಂತೋಷ ಕುಮಾರ ಬಿರಾದಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author