ಸಿದ್ದರಾಮಯ್ಯ ಸಿಎಂ ಆಗಬೇಕು, ಭೀಮಣ್ಣ ಮೇಟಿ ಶಾಸಕರಾಗಬೇಕೆಂದು ಹರಕೆ ಹೊತ್ತ ಅಭಿಮಾನಿಗಳು

ವಡಗೇರಾ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಲವಾರು ಟಿಕೆಟ್ ಆಕಾಂಕ್ಷಿಗಳು ದೇವರ ಮತ್ತು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಮತ್ತುಯಾದಗಿರಿ ಕ್ಷೇತ್ರದಿಂದ ಡಾ.ಭೀಮಣ್ಣ ಮೇಟಿಯವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು.ಬೀಮಣ್ಣ ಮೇಟಿ ಈ ಕ್ಷೇತ್ರದ ಶಾಸಕರಾಗಬೇಕು.ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂದು ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಶರಬಣ್ಣ ರಸ್ತಾಪುರ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತ ಜೋಗಿ ತೇಕರಾಳ ಇಂದು ಭೀಮ ನದಿ ತೀರದಲ್ಲಿರುವ ಆದಿಶಕ್ತಿ ಮಹಾಂಕಾಳಿಗೆ ಸಾಷ್ಟಾಂಗ ( ರೀಡ್ ನಮಸ್ಕಾರ) ನಮಸ್ಕಾರ ಹಾಕುವ ಮೂಲಕ ಹರಕೆ ಮಾಡಿಕೊಂಡರು.
       *****
     ‌‌‌‌‌‌‌ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದರೆ ಬಡವರ ಕಾರ್ಮಿಕರ ಏಳಿಗೆಯಾಗುತ್ತದೆ. ಅನ್ನಭಾಗ್ಯ ಕ್ಷೀರಭಾಗ್ಯದಂತಹ ಮಹತ್ವದ ಯೋಜನೆಗಳು ಮತ್ತೆ ಜಾರಿಗೆ ಬರುತ್ತವೆ. ಬಡವರು ರಾಜ್ಯದಲ್ಲಿ ಬದುಕುತ್ತಾರೆ. ರಾಜ್ಯ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಡಾ.ಭೀಮಣ್ಣ ಮೇಟಿ ಯವರಿಗೆ ಟಿಕೆಟ್ ಕೊಟ್ಟರೆ ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದರಲ್ಲಿ  ಯಾವುದೇ ಅನುಮಾನವಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಭೀಮಣ್ಣ ಮೇಟಿ ಕ್ಷೇತ್ರದಲ್ಲಿ ಹಲವಾರು ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಆರೋಗ್ಯ ಶಿಬಿರ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಕ್ಷೇತ್ರದಾದ್ಯಂತ ವಸತಿ ರಹಿತರಿಗೆ ಮನೆ ಕಟ್ಟಿಕೊಡಲು ಕೈಗೊಂಡ ಹಲವು ಕಾರ್ಯಗಳು ಅವರ ಜನಸ್ನೇಹಿ ಕಾರ್ಯಗಳಾಗಿವೆ ಎಂದರು.
*****
          ಈ ಸಂದರ್ಭದಲ್ಲಿ ಹೊನ್ನಪ್ಪ ಮುಸ್ಟೂರು, ಭೀಮರಾಯ ಭಂಡಾರಿ, ಬೀರೇಶ ಚಿಂತೆನೂರು, ಮಲ್ಲನಗೌಡ, ನಾಗಣಗೌಡ, ದೇವೇಂದ್ರಪ್ಪ ಗುಂಡಳ್ಳಿ, ಪರಮಣ್ಣ ಸುರಪುರ, ಕೃಷ್ಣಪ್ಪ ಬಾದ್ಯಪುರ, ಮರಿಲಿಂಗಪ್ಪ ಗಡ್ಡೆಸೂಗೂರು, ಮಲ್ಲಿಕಾರ್ಜುನ ಬಂದಳ್ಳಿ, ಮೌನೇಶ ಪೂಜಾರಿ,ಕಲ್ಯಾಣ ಕರ್ನಾಟಕದ ಸಿದ್ದರಾಮಯ್ಯ ಅಭಿಮಾನಿ ಬಳಗದವರು  ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

About The Author