ಮಹಾಶೈವ ಧರ್ಮಪೀಠದಲ್ಲಿ 36 ನೆಯ ‘ ಶಿವೋಪಶಮನ ಕಾರ್ಯ’

ರಾಯಚೂರು : ಜಿಲ್ಲೆಯ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಗಬ್ಬೂರು ಕೈಲಾಸದಲ್ಲಿ  26.02.2023 ರ ರವಿವಾರದಂದು 36 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ನೂರಾರು ಜನ ಭಕ್ತರಿಗೆ ಶಿವಾನುಗ್ರಹವನ್ನು ಕರುಣಿಸಿ ಅವರುಗಳನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿದರು,ಸಂಕಟಮುಕ್ತರನ್ನಾಗಿಸಿದರು.

ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ದಾಸೋಹಕ್ಕೆ ಪಾತ್ರೆಗಳು,ಬುಟ್ಟಿಗಳು ಮೊದಲಾದ ಸಾಮಗ್ರಿಗಳ ಕೊಡುಗೆ ನೀಡಿದ ಮೃತ್ಯುಂಜಯ ಯಾದವ್ ಮತ್ತು ದಾಸೋಹಿಗಳಾದ ಲಿಂಗರಾಜ ಮಸೀದಪುರ ಮತ್ತು ಆಂಜನೇಯಲು ಅವರುಗಳನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದಾಸೋಹ ಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿ,ಸಾಂಸ್ಕೃತಿಕ ಸಮಿತಿಯು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ, ಶಿವಯ್ಯ ಮಠಪತಿ,ಚನ್ನಪ್ಪಗೌಡ ಮಾಲೀಪಾಟೀಲ್, ಪಂಚಯ್ಯ ಕರಿಗಾರ,ಯಲ್ಲಪ್ಪ ಕರಿಗಾರ,ಹನುಮೇಶ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ ಉದಯಕುಮಾರಇ ಇದ್ದರು.

About The Author