ಶಾಸಕರಿಂದ 2023 ರ ಸಗರನಾಡು ಸೇವಾ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ

ಶಹಾಪುರ : ಸಗರನಾಡು ಸೇವಾ ಸಂಸ್ಥೆಯ 2023 ರ ಕ್ಯಾಲೆಂಡರನ್ನು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ ಬಿಡುಗಡೆಗೊಳಿಸಿದರು ಮಾತನಾಡಿದ ಅವರು ಸಗರನಾಡು ಸೇವಾ ಸಂಸ್ಥೆ ಸುಮಾರು ಎರಡು ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಾದಗಿರಿ ಜಿಲ್ಲೆಯ ತುಂಬಾ ವಿನೂತನವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಜಿಲ್ಲೆಯಲ್ಲಿ ಕ್ರೀಯಾಶೀಲ ಸಂಸ್ಥೆಯಾಗಿ ಕೆಲಸ ಮಾಡಿದ ಶ್ರೇಯಸ್ಸು ಸಗರನಾಡು ಸೇವಾ ಸಂಸ್ಥೆಗೆ ಸಲ್ಲುತ್ತದೆ ಎಂದು ಎಂದು ಹೇಳಿದರು. 
  ಸಂಸ್ಥೆಯ ಅಧ್ಯಕ್ಷರಾದ ಶ್ರೀ ಭೀಮಣ್ಣಗೌಡ ಪಾಟೀಲ್ ಸೈದಾಪುರ ಮಾತನಾಡಿ,ಹಲವಾರು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳು ಸಾಧಕರಿಗೆ ಸನ್ಮಾನ, ಗ್ರಾಮೀಣ ಕಲಾವಿದರಿಗೆ ಗೌರವಿಸುವುದು, ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡಪರ ಹೋರಾಟಗಾರರಿಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಸಗರನಾಡು ಸೇವಾ ಸಂಸ್ಥೆಯ ಅಭಿಲಾಷೆ ವಾಗಿದೆ ಎಂದು ಹೇಳಿದರು.
   ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲ್ದಾಪೂರ ಮಾತನಾಡಿ, ಈ ಸಂಸ್ಥೆಯ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮುಖಾಂತರ ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ,, ಹೊಸಬೆಳಕು ಟ್ರಸ್ಟ್ ಅಧ್ಯಕ್ಷರಾದ  ಶರಣಗೌಡ ಪೋಲಿಸ್ ಬೀರೆದಾರ, ಶರಣಗೌಡ ಗೂಂಡಾಪುರ, ಹೊನ್ನಪ ಅಂಬಿಗರ ಮಲ್ಲಿಕಾರ್ಜುನ ಆರಭೊಳ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಬಂಧುಗಳು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

About The Author