ಫೆಬ್ರವರಿ ಕೊನೆಯಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ : ಬಸವರಾಜ ಸಿನ್ನೂರ

ಶಹಾಪುರ : ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಫೆಬ್ರುವರಿ ಕೊನೆಯ ವಾರದಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಸಿನ್ನೂರ ಪ್ರಕಟಣೆಗೆ ತಿಳಿಸಿದ್ದಾರೆ.
   ಅಧುನಿಕ ಭರಾಟೆಯಲ್ಲಿ ಸಾಹಿತ್ಯ ಮರೆಯಾಗುತ್ತಿದ್ದು,ಹೆಚ್ಚೆಚ್ಚು ಯುವ ಪೀಳಿಗೆ ಓದುವ ಹವ್ಯಾಸ ಅಭಿವೃದ್ಧಿಯೊಂದಿಗೆ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಗಡಿನಾಡಿನ ಸಮಸ್ಯೆ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವ  ಪೂರಕವಾಗಿ ಈ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ  ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
   ಗಡಿನಾಡಿನ ಜನರ ಜೀವನ ಬದುಕು ಬವಣೆಯ ಬಗ್ಗೆ ಬೆಳಕು ಚೆಲ್ಲುವ ಸಮ್ಮೇಳನವಾಗುವಂತೆ ಸಮಾರಂಭ ಆಯೋಜಿಸಿ ಈ ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ಆಡಳಿತದಲ್ಲಿ ಶ್ರೀ ಸಾಮಾನ್ಯರ ಸ್ಪಂದನೆಗೆ ನಿಲುಕುವ ಸಮ್ಮೇಳನವಾಗಲಿದೆ,ಅಲ್ಲದೆ  ಗಡಿನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ಐತಿಹಾಸಿಕ ಸಮ್ಮೇಳನ ಇದಾಗಲಿದ್ದು ಈ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕನ್ನಡ ಮನಸುಗಳಲ್ಲಿ ಹಾಗೂ ಸಾಹಿತ್ಯಸಕ್ತರಲಿ ಮನವಿ ಮಾಡಿಕೊಂಡರು.

About The Author