ಮಹಾಶೈವ ಧರ್ಮಪೀಠವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 34 ನೆಯ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಫೆಬ್ರವರಿ 05 ರಂದು 34 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ಶ್ರೀ ವಿಶ್ವೇಶ್ವರನ ಲೋಕಾನುಗ್ರಹದೃಷ್ಟಿಯನ್ನು ಭಕ್ತರತ್ತ ಹರಿಸಿ,ಅವರನ್ನು ಸಂಕಟಮುಕ್ತರನ್ನಾಗಿಸುವ ಆಧ್ಯಾತ್ಮಿಕ ಕಾರ್ಯವೇ ‘ ಶಿವೋಶಮನ ಕಾರ್ಯ’ ವಾಗಿದೆ.ಶಿವ ವಿಶ್ವೇಶ್ವರನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಅನಾರೋಗ್ಯ,ಸಮಸ್ಯೆ- ಸಂಕಟಗಳಿಗೆ ಮುಕ್ಕಣ್ಣ ಕರಿಗಾರ ಅವರ ಮೂಲಕ ಪರಿಹಾರ ಸೂಚಿಸುವ ಅತಿವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಕಾರ್ಯವೆಂದು ‘ಶಿವೋಪಶಮನ ಕಾರ್ಯ’ ಪ್ರಸಿದ್ಧಿಪಡೆದಿದೆ.ಇಂದಿನ ಶಿವೋಪಶಮನದಲ್ಲಿ ಗಬ್ಬೂರು ಹಾಗೂ ಪರ ಊರುಗಳ ನೂರಾರು ಭಕ್ತರುಗಳು ಪಾಲ್ಗೊಂಡಿದ್ದರು.

About The Author