ಶಹಾಪುರ ಬೈಪಾಸ್ ರಸ್ತೆ ಮಂಜೂರು,ಸಂಸದರಿಗೆ ಅಭಿನಂದನೆ ಸಲ್ಲಿಸಿದ ಡಾ. ಚಂದ್ರಶೇಖರ ಸುಬೇದಾರ

ಶಹಾಪುರ : ಶಹಾಪುರ ಕ್ಷೇತ್ರಕ್ಕೆ ಬೈಪಾಸ್ ರಸ್ತೆ ಮಂಜೂರು ಮಾಡಿಕೊಡುವಲ್ಲಿ ಯಶಸ್ವಿಯಾದ ಸಂಸದರಾದ ಅಮರೇಶ ನಾಯಕ ರವರಿಗೆ ಬಿಜೆಪಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ ಅಭಿನಂದನೆ ಸಲ್ಲಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾದಗಿರಿ ಮತ್ತು ರಾಯಚೂರಿಗೆ ಸಂಸದರು ಹಲವು ಅಭಿವೃದ್ಧಿ ಕಾರ್ಯಗಳು ಮಾಡಿದ್ದು, ಈ ಹಿಂದೆ ಯಾದಗಿರಿ ನಗರಕ್ಕೂ ಬೈಪಾಸ್ ರಸ್ತೆ ಒದಗಿಸಿದ್ದರು. ನಂತರ ಶಹಪೂರ ನಗರವು ಅತಿ ಹೆಚ್ಚು ಜನಸಂದಣಿಯಿಂದ ಕೂಡಿದ್ದು, ವಾಣಿಜ್ಯ ನಗರವಾಗಿ ಮಾರ್ಪಡುತ್ತಿದೆ. ಕಲ್ಬುರ್ಗಿ ವಿಜಯಪುರ ಪೂನೆ ಸೊಲ್ಲಾಪುರ ಸೇರಿದಂತೆ ಆಂಧ್ರಪ್ರದೇಶದ ಮಹಾರಾಷ್ಟ್ರ ಹೊರ ರಾಜ್ಯಗಳಿಂದ ಹಲವಾರು ವಾಹನಗಳು ನಗರದೊಳಗಿನಿಂದ ಬರುವ ನಿಮಿತ್ತ ನಗರದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶಹಪುರ ನಗರಕ್ಕೂ ಬೈಪಾಸ್ ರಸ್ತೆ ಒದಗಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಂಸದರು ಶಹಪೂರ ಬೈಪಾಸ್ ರಸ್ತೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು.

 

ಈ ಸಂದರ್ಭದಲ್ಲಿ ಜನವರಿ 8ರಂದು ಶಹಪುರ ಸಿಪಿಎಸ್ ಶಾಲಾ ಮೈದಾನದಲ್ಲಿ ದಿ. ಅಚ್ಚಪ್ಪಗೌಡ ಸುಬೇದಾರ ರೂರಲ್ ಮತ್ತು ಅರ್ಬನ್ ಟ್ರಸ್ಟ್ ವತಿಯಿಂದ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಲು ಸಂಸದರಿಗೆ ಆಹ್ವಾನ ನೀಡಲಾಯಿತು.

 

ಯಾದಗಿರಿ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ರಾಜಶೇಖರ ಗೂಗಲ್ ಅಡಿವೆಪ್ಪ ಜಾಕ ಸೇರಿದಂತೆ ಇತರರು ಇದ್ದರು.

About The Author