ಶಹಾಪುರ :ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾಗಿ ಭೀಮಣ್ಣ ಶಾಖಾಪುರ ಆಯ್ಕೆಯಾಗಿದ್ದು, ಮೊದಲ ಭಾರಿಗೆ ಶಹಾಪುರಕ್ಕೆ ಆಗಮಿಸಿದ ಹಿನ್ನಲೆ ಭೀಮರಾಯನಗುಡಿಯ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಸನ್ಮಾನಿಸಿ ಬರಮಾಡಿಕೊಂಡರು.
ಇದೆ ಸಮಯದಲ್ಲಿ ಮಾತನಾಡಿದ ಭೀಮಣ್ಣ ಶಾಖಾಪುರ, ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ನನ್ನನ್ನು ರಾಜ್ಯ ಪ್ರಧಾನ ಸಂಚಾಲಕರಾಗಿ ಮಾಡಿದ್ದು ಖುಷಿಯ ವಿಚಾರ. ಕನ್ನಡ ನಾಡು ಹಾಗೂ ಭಾಷೆಯನ್ನು ಉಳಿಸಲು, ಬೆಳೆಸಲು ಜನ್ಮವಿರುವವರೆಗೂ ಶಕ್ತಿಮೀರಿ ಪ್ರಯತ್ನಿಸುತ್ತೇನೆ.ನ್ಯಾಯಯುತ ಕಾರ್ಯಗಳು, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಮ್ಮ ಕರ್ನಾಟಕ ಸೇನೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಪ್ರಯತ್ನ ಪಡುತ್ತೇನೆ ಎಂದರು.
ನಮ್ಮ ಕರ್ನಾಟಕ ಸೇನೆಯ ನೂತನ ಶಹಾಪುರ ತಾಲೂಕ ಅಧ್ಯಕ್ಷರಾಗಿ ಸಿದ್ದು ಪಟ್ಟೇದಾರ ರವರ ಆಯ್ಕೆ ಮಾಡಲಾಯಿತು. ಯುವ ಘಟಕದ ತಾಲೂಕ ಅಧ್ಯಕ್ಷರಾಗಿ ಸಂಜು ಪೂಜಾರಿ ಅವರಿಗೆ ಆಯ್ಕೆ ಮಾಡಲಾಯಿತು.
ಸನ್ಮಾನ ಕಾರ್ಯದಲ್ಲಿ ಹಿರಿಯರಾದ ವಿಜಯ ಸಿಂಗ್, ಶಶಿಪಾಲಾರೆಡ್ಡಿ ಬಿ ಪಾಟೀಲ್, ಭೀಮರಾಯ ಬಸಂತಪುರ, ವೆಂಕಟೇಶ್ ಹೊಸಕೇರ, ಸೈಫನ್ ದೊರನಹಳ್ಳಿ, ರಾಜು ಗುಂಡಗುರ್ತಿ, ರಾಯಣ್ಣ ಹೋತಪೇಟ, ಯಲ್ಲಪ್ಪ ಯಾದವ್, ಬಾಬು ಗಂವ್ಹಾರ, ಅಂಬರೀಶ ಗುತ್ತೇದಾರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು