ಮಾಜಿ ಸಿಎಮ್ ಗೆ ನಿಂದನೆ ಗಡಿಪಾರಿಗೆ ಆಗ್ರಹ

ಶಹಾಪುರ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ನಿಂದಿಸಿದ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಬಸವಲಿಂಗಯ್ಯ ಮಠರನ್ನು ಗಡಿಪಾರು ಮಾಡಬೇಕು ಎಂದು ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘ ರಾಜ್ಯ ಗೃಹಸಚಿವರಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ತಹಶೀಲ್ದಾರರಿಗೆ ಮನವಿ ಮಾಡಿದರು. ಈ ರೀತಿಯಾಗಿ ಜಾತಿಯ ಹೆಸರೆತ್ತಿ ಮಾತನಾಡಿದ ಬಸವಲಿಂಗಯ್ಯ ಮಠ ಮೇಲೆ ಎಫ್ಐಆರ್ ದಾಖಲಿಸಬೇಕು. ರಾಜ್ಯದಲ್ಲಿ 60 ಲಕ್ಷ ಜನರಿರುವ ಕುರುಬ ಸಮಾಜದವರು ಇದನ್ನು ಸಹಿಸುವುದಿಲ್ಲ. ಸರಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಭೀಮಣ್ಣ ಮೇಟಿ, ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ, ತಾಲೂಕು ಯುವ ಘಟಕದ ಅಧ್ಯಕ್ಷರಾದ ರವಿ ರಾಜಾಪುರ ಶರಭಣ ರಸ್ತಾಪುರ ಭೀಮಣ್ಣಗೌಡ, ಶರಣಗೌಡ ಸಿದ್ಧಣ್ಣ ಅಶೋಕ್ ದಿನ್ನಿ ಬಲಬೀಮ ಮಡ್ನಾಳ ಮುನಿಯಪ್ಪಗೌಡ ಸಾಯಿಬಣ್ಣ ಮಾಳಪ್ಪ ಸಿದ್ದು ಮಾಳಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು.

ಜಾತಿ ನಿಂದನೆ ಗೈದ ಬಸಲಿಂಗಯ್ಯ ಮಠನನ್ನು  ಕೂಡಲೇ ಬಂಧಿಸಿ ಶಿಕ್ಷೆ ಕೊಡಿಸಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡುವ ಇಂತಹ ವ್ಯಕ್ತಿಗಳನ್ನು ದೇಶದಿಂದಲೇ ಗಡಿಪಾರು ಮಾಡುವುದು ಉತ್ತಮ.

ರವಿ ರಾಜಾಪುರ 

ತಾಲೂಕು ಯುವ ಕುರುಬ ಸಮಾಜದ ಅಧ್ಯಕ್ಷರು

 

 

About The Author