ಹಿಂದುಳಿದ ವರ್ಗದ ಜನನಾಯಕನ ಜನ್ಮದಿನಾಚರಣೆ

ಶಹಾಪುರ:ಅಹಿಂದ ವರ್ಗದ ಜನನಾಯಕ ಡಾ.ಭೀಮಣ್ಣ ಮೇಟಿಯವರ ಹುಟ್ಟು ಹಬ್ಬವನ್ನು ಡಿ ಡಿ ಯು ಶಿಕ್ಷಣ ಸಂಸ್ಥೆ ಸಂಸ್ಥೆಯಲ್ಲಿ ಸರಳವಾಗಿ ಆಚರಿಸಲಾಯಿತು.ಡಿಡಿಯು ಶಿಕ್ಷಣ ಸಂಸ್ಥೆಯ‌ ಸಂಸ್ಥಾಪಕರು ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಮೇಟಿಯವರು ಕಲ್ಯಾಣ ಕರ್ನಾಟಕದಾದ್ಯಂತ ದೇವರಾಜ ಅರಸುರವರ ಹೆಸರಿನಡಿ ಶಿಕ್ಷಣ ಸಂಸ್ಥೆಗಳನ್ನು ಆರಂಬಿಸಿದ್ದು,TET,NEET,ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ LKG ಯಿಂದ ಉನ್ನತ ಶಿಕ್ಷಣದವರಿಗೆ ವ್ಯಾಸಂಗ ನೀಡಲಾಗುತ್ತಿದೆ

ಶಹಾಪುರ,ಯಾದಗಿರಿ,ಕಲಬುರ್ಗಿ,ವಡಗೇರಾ,ಸೈದಾಪುರ,ದೋರನಹಳ್ಳಿಯಲ್ಲಿ ಸಂಸ್ಥೆಗಳನ್ನು ಆರಂಭಿಸಿದ್ದು ಶೈಕ್ಷಣಿಕ ಕ್ರಾಂತಿಯನ್ನೆ ಮಾಡಿದ್ದಾರೆ.ಬಡವರಿಗೆ ಹತ್ತನೆ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.ಮಹೇಶ್ ಭಂಗಿ ಕೊಳೂರು M ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಮೇಟಿಯವರ ಅಭಿಮಾನಿಗಳು ಆಗಮಿಸಿದ್ದರು.ಸಂಸ್ಥೆಯ ಶಿಕ್ಷಕ ವೃಂದದವರು ಶಾಲಾ ಮಕ್ಕಳು ಇದ್ದರು.

About The Author