ಪ್ರತಿ ಮನೆಯ ಮೇಲೆ ಧ್ವಜ ಹಾರಿಸಿ

ಶಹಾಪುರ : ೭೫ ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಸಂಭ್ರಮದಲ್ಲಿ ಹರ್ ಗರ್ ತಿರಂಗಾ ಆಚರಿಸುವ ಸದುದ್ದೇಶದಿಂದ ಗ್ರಾಮದ ಪ್ರತಿಯೊಬ್ಬರ ಮನೆ ಮೇಲೆ ಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆಯಬೇಕು ಎಂಬ ಸದಾಶಯದೊಂದಿಗೆ ತಾಲ್ಲೂಕಿನ ಸಗರ ಗ್ರಾಮದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡದೆ ದೇಶದ ಮೇಲಿರುವ ಅಭಿಮಾನ ಮತ್ತು ಪ್ರೀತಿಯಿಂದ ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸಬೇಕೆಂಬುದು ನಮ್ಮ ನಿಮ್ಮೆಲ್ಲರ ಆಶೆಯಾಗಿದೆ.ಎಂಬ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಗರಿಕರು ಪ್ರಜೆಯೂ ಸಂಭ್ರಮದಲ್ಲಿ ಭಾಗವಹಿಸಬೇಕು ಎಂದು ಕಳಕಳಿಯಿಂದ ಮನವಿ ಮಾಡಿಕೊಂಡರು.ಗ್ರಾಮದ ಹಿರಿಯರಾದ ಭೀಮರಾಯ ಸೇರಿ, ನಾಗಣ್ಣ ಜಾಯಿ,ತಿರುಪತಿ ಹತ್ತಿಕಟಿಗಿ,ತಿರುಪತಿ ಸೇರಿ,ಪಿಡ್ಡಪ್ಪ ನಂದಿಕೋಲ,ಶಿವಶರಣ ಕುಡ್ಲೂರು, ಶಿವಣ್ಣಗೌಡ ಗೌಡ್ರ,ಹಾಗೂ ಇತರರು ಹಾಜರಿದ್ದರು

About The Author