ಡಾ.ಜಿ.ಪರಮೇಶ್ವರ ರವರಿಗೆ ಜನ್ಮದಿನದ ಶುಭಾಶಯ ಕೋರಿದ ಬಿಎಮ್.ಪಾಟೀಲ

ಬೆಂಗಳೂರು:: ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರು,ಕೊರಟಗೆರೆ ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ ರವರಿಗೆ ತುಮಕೂರು ನಿವಾಸದಲ್ಲಿ ಕೆಪಿಸಿಸಿ ವಕ್ತಾರರಾದ ಬಿಎಮ್.ಪಾಟೀಲರು ಕನಕದಾಸರ ಭಾವಚಿತ್ರವನ್ನು ನೆನಪಿನ ಕಾಣಿಕೆ ನೀಡುವುದರ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದರು.ನಂತರ ಸನ್ಮಾನಿಸಿದ ಪಾಟೀಲರ ಜೊತೆಗೆ ಬಳ್ಳಾರಿ ಕಾಂಗ್ರೆಸ್ ಹಿರಿಯ ಮುಖಂಡ ಎಲ್. ಮಾರೆಣ್ಣ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಲ್. ಸೂರ್ಯನಾರಾಯಣ, ಅರುಣ್ ಕುಮಾರ್, ಕಮರ್ಚೇಡು ಬಸವನಗೌಡ ಸೇರಿದಂತೆ ಇತರರು ಸಾಥ್ ನೀಡಿದರು.

About The Author