ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ಮುಖ್ಯ : ಡಾ.ಹೊನ್ಕಲ್

ಯಾದಗಿರಿ : ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ  ಚರಿತ್ರೆ ಬಹುಮುಖ್ಯ ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಹೇಳಿದರು.ಯಾದಗಿರಿ ನಗರದ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಉತ್ತಮ ವ್ಯಾಸಾಂಗ ಮಾಡಬೇಕು. ಉನ್ನತಮಟ್ಟದ ಜೀವನ ರೂಪಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಇರಬೇಕು. ನಾಡಿನ ಸಾಕ್ಷಿಪ್ರಜ್ಞೆಯ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಕಥೆ ಚಿತ್ರಕಥೆ ನಿರ್ದೇಶನದ ಸ್ವಪ್ನಮಂಟಪ ಸಿನೆಮಾ ಪ್ರದರ್ಶನದ ಆಶಯ ನುಡಿಯಲ್ಲಿ ಈ ನಾಡಿನ ಅಸ್ಮಿತೆಯಾದ ಡಾ.ಬರಗೂರ ಅವರ ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಚಲನಚಿತ್ರಗಳಲ್ಲಿಯ ಸಾಧನೆ ಹಾಗೂ ಪ್ರಸ್ತುತ ಸ್ವಪ್ನಮಂಟಪದ ಚಾರಿತ್ರಿಕ, ವಾಸ್ತವಿಕ ಘಟನೆಗಳ ಹಿನ್ನೆಲೆಯ ಮನೋಜ್ಞ ಪ್ರೀತಿ ಪ್ರೇಮ ನಾಡು ನುಡಿಯ ಕಾಳಜಿಯ ಹಿನ್ನೆಲೆಯಲ್ಲಿ ಪರಿಚಯಸಿದವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಡಾ.ಸುಭಾಸಚಂದ್ರ ಕೌಲಗಿಯವರು ವಹಿಸಿಮಾತನಾಡುತ್ತಾ, ತಮ್ಮ ವಿದ್ಯಾರ್ಥಿಗಳಿಗೆ ಪ್ರೊ.ಬರಗೂರರಂತಹ ನಾಡಿನ ಬಹುದೊಡ್ಡ ಲೇಖಕರನ್ನು ಪರಿಚಯಿಸುವ ಮೂಲಕ ಅವರ ನಿರ್ದೇಶನದ ಈ ಚಾರಿತ್ರಿಕ ಮಹತ್ವದ ಚಲನಚಿತ್ರ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆಯ ಜೊತೆಗೆ ಸಾಂಸ್ಕೃತಿಕ ಪರಂಪರೆ ನಾಡುನುಡಿಯ ಅಭಿಮಾನ ಬೆಳೆಸುವ ಈ ಚಿತ್ರದ ಪ್ರದರ್ಶನ ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದು ಸಂತೋಷ.ಆ ಕಾರಣದಿಂದ ಪ್ರೊ.ಬರಗೂರರಿಗೂ ನಮ್ಮ ಜಿಲ್ಲೆಯ ಹೆಮ್ಮೆಯ ಲೇಖಕ ಡಾ.ಹೊನ್ಕಲ್ ರವರಿಗೆ ಕಾರ್ಯ ಶ್ಲಾಘನೀಯ ಎಂದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ ಕೊಂಕಲ್ ನಿರ್ವಹಿಸಿ ವಂದಿಸಿದರು. ಲೇಖಕಿ ಜಯದೇವಿ ಗಾಯಕವಾಡ, ಡಾ.ಲಿಂಗೇರಿ ಉಪನ್ಯಾಸಕರು ಅಪಾರ ಸಂಖ್ಯೆಯ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.