ಕರ್ನಾಟಕ ಅಹಿಂದ ಜನ ಸಂಘದ ಕೊಪ್ಪಳ ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಗಂಗವ್ವ ಮಲ್ಲಪ್ಪ ನೇಮಕ

ಬೆಂಗಳೂರು :- ಕರ್ನಾಟಕ ಅಹಿಂದ ಜನ ಸಂಘದ ಕೊಪ್ಪಳ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಗಂಗವ್ವ ಮಲ್ಲಪ್ಪ ಹುಡೇದ್ ಪೂಜಾರಿ ರವರನ್ನು ನೇಮಕ ಮಾಡಲಾಗಿದೆ.

ಅಹಿಂದ ಜನ ಸಂಘದ ಸಂಸ್ಥಾಪಕರು ಮತ್ತು ರಾಜ್ಯಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ಗಂಗವ್ವ ಮಲ್ಲಪ್ಪ ಹುಡೇದ್ ಪೂಜಾರಿ ನೇಮಕ ಮಾಡಿ. ಅಹಿಂದ ಸಮುದಾಯದ ಜನರು ಸಾಮಾಜಿಕಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋ ಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.ತಮ್ಮನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗಂಗವ್ವ ಮಲ್ಲಪ್ಪ ಹುಡೇದ್ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.