ದೇವದುರ್ಗಾ ಚುನಾವಣಾ ಉಸ್ತುವಾರಿಗಳಾಗಿ ಆಲೂರ ನೇಮಕ

ಶಹಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಲೋಕಸಭಾ ಚುನಾವಣೆಯ ನಿಮಿತ್ತ ಶಹಾಪುರ ಮತಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಿಗಳ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ ನಿರ್ಧೇಶನದಂತೆ ಕೆಪಿಸಿಸಿ ಪಜಾ ಘಟಕದ ರಾಜ್ಯ ಸಮಿತಿ ಅಧ್ಯಕ್ಷರಾದ ಆರ್,ಧರ್ಮಸೇನ ರವರ ನಿರ್ರಾದೇಶನದ ಮೇರೆಗೆ ರಾಜ್ಯ ಕಾರ್ಯಕಾರಿಣಿ  ಸಮಿತಿ ಸದಸ್ಯರಿಗೆ ರಾಜ್ಯಾದ್ಯಂತ ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ರಾಯಚೂರ ಮತಕ್ಷೇತ್ರದ ದೇವದುರ್ಗಾ ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ಮುಖಂಡ ವೆಂಕಟೇಶ ಆಲೂರವರನ್ನು ನೇಮಕ ಮಾಡಿ ಆದೇಶಲಾಗಿದೆ.ರಾಜ್ಯದಲ್ಲಿ ಕೆಪಿಸಿಸಿ ಎಸ್,ಸಿ,ಘಟಕದ ಜಿಲ್ಲಾ ಅಧ್ಯಕ್ಷರು, ಮಾಧ್ಯಮ ವಕ್ತಾರರೊಂದಿಗೆ ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

About The Author