ಮಹಾಶೈವ ಧರ್ಮಪೀಠದಲ್ಲಿ 84 ನೆಯ ‘ ಶಿವೋಪಶಮನ ಕಾರ್ಯ’

ಗಬ್ಬೂರು ಮಾರ್ಚ್ 17,2024 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮಾರ್ಚ್ 17 ರ ಆದಿತ್ಯವಾರದಂದು 84 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವೇಶ್ವರ ಶಿವನ ಅನುಗ್ರಹದಿಂದ ಕಂಕಣಭಾಗ್ಯವು ಒದಗಿ ಇತ್ತೀಚೆಗೆ ಮದುವೆಯಾದಸೈದಾಪುರದ ಗಂಗಾಧರಯ್ಯ ಸ್ವಾಮಿ ತನ್ನ ಪತ್ನಿ ಭಾಗ್ಯಶ್ರೀ ಹಾಗೂ ತನ್ನ ತಂದೆ ತಾಯಿ ಅಣ್ಣನೊಂದಿಗೆ ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಕೈಲಾಸಕ್ಕೆ ಆಗಮಿಸಿ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನರ್ಪಿಸಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಿದರು. ಗಂಗಾಧರಯ್ಯ ಸ್ವಾಮಿಯವರ ತಂದೆಯುಸೈದಾಪುರದ ಕೆಇಬಿ ಆಫೀಸ್ ಪಕ್ಕದಲ್ಲಿ ಶ್ರೀ ಬಸವೇಶ್ವರ ಖಾನಾವಳಿಯನ್ನು ಹೊಂದಿದ್ದು ಗಂಗಾಧರಯ್ಯ ಸ್ವಾಮಿ ಟ್ಯಾಕ್ಸಿ ಕಾರುಗಳ ವ್ಯವಹಾರ ನಿರ್ವಹಿಸುತ್ತಿದ್ದಾರೆ.ಮದುವೆಯಾಗಲಿಚ್ಛಿಸಿ ನಾಲ್ಕೈದು ವರ್ಷಗಳಿಂದಲೂ ಕನ್ಯಾನ್ವೇಷಣೆ ಮಾಡುತ್ತಿದ್ದರೂ ಸಂಬಂಧ ಕುದುರಿರಲಿಲ್ಲ.ಮಹಾಶೈವ ಧರ್ಮಪೀಠಕ್ಕೆ ಬಂದು ಪೀಠಾಧ್ಯಕ್ಷರ ಬಳಿ ಸಮಸ್ಯೆ ಹೇಳಿಕೊಳ್ಳಲು ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದ್ದರು.ಅದರಂತೆ 11.02.2024 ರಂದು ಗಂಗಾಧರಸ್ವಾಮಿ ಕಲ್ಬುರ್ಗಿಯ ಭಾಗ್ಯಶ್ರೀಯವರನ್ನು ಮದುವೆಯಾಗಿದ್ದರು.ಭಕ್ತಿ,ಗೌರವಗಳ ಕೃತಜ್ಞತೆಗಳನ್ನು ಸಮರ್ಪಿಸಲು ಇಂದು ಕುಟುಂಬ ಸಮೇತರಾಗಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ್ದರು.ಪೀಠಾಧ್ಯಕ್ಷರು ಗಂಗಾಧರಯ್ಯ ಭಾಗ್ಯಶ್ರೀ ದಂಪತಿಗಳನ್ನು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿ, ‘ ಸಂತಾನಪ್ರಾಪ್ತಿರಸ್ತು’ ಎಂದು ಆಶೀರ್ವದಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಯಲ್ಲಪ್ಪ ಕರಿಗಾರ,ಹನುಮೇಶ,ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬಸವರಾಜ ಹದ್ದಿನಾಳ,ಮರಿಲಿಂಗ ಹದ್ದಿನಾಳ,ರಂಗನಾಥ ಮಸೀದಪುರ,ಭೀಮಣ್ಣ ಗಣಜಲಿ,ಗಂಗಪ್ಪ ಹಿಂದುಪುರ,ಮೌನೇಶ ಬಳ್ಳಾರಿ,ಶಿವಾನಂದ ಮಸೀದಪುರ,ಶಿವಕುಮಾರ ವಸ್ತಾರ ಹಾಗೂ ಪತ್ರಕರ್ತರುಗಳಾದ ರಮೇಶ ಖಾನಾಪುರ,ಏಳುಬಾವೆಪ್ಪಗೌಡ ಗಬ್ಬೂರು ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

About The Author