ಶಹಾಪುರ : ಸಗರ ನಾಡಿನ ಪ್ರತಿಷ್ಠಿತ ದೇಶಮುಖ ಮನೆತನದ ಕುಡಿ ಶಿವರಾಜ ದೇಶಮುಖಗೆ ರಾಜಧಾನಿಯಲ್ಲಿ ಮಾರ್ಚ್ 12 ರಂದು ಬೆಂಗಳೂರಿನ ಪಂಚತಾರೆ ಹೋಟೆಲ್ ಲಲಿತ ಅಶೋಕದಲ್ಲಿ ನಡೆದ ಯುವರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.
ಸಚಿವರಾಜ ಶಿವರಾಜ ತಂಗಡಗಿ, ಚೆಲುವರಾಯಸ್ವಾಮಿ, ಅನಿಲ್ ಲಾಡ್, ರಾಮಲಿಂಗ ರೆಡ್ಡಿ, ನಿರ್ಮಾಪಕಿ ಅಶ್ವಿನಿ ಪುನೀತ ರಾಜಕುಮಾರ, ನಟ ವಿಜಯ ರಾಘವೇಂದ್ರ, ಧ್ರುವ ಸರ್ಜಾ ನಟಿ ಆರಾಧನಾ ಸೇರಿದಂತೆ ಅನೇಕರು ಇದ್ದರು.