ನಾಡ ತಹಶಿಲ್ದಾರ ಬಸವರಾಜ ಅವರು ಅಮಾನತ್ತಿಗೆ ಒತ್ತಾಯ

ದೇವದುರ್ಗ: ತಾಲ್ಲೂಕಿನ ಗಬ್ಬೂರು ಹೋಬಳಿಗೆ ಒಳಪಡುವ ಮಲದಕಲ್ ಗ್ರಾಮದ ವಿಧವೆ ಉಮಾದೇವಿ ಗಂಡ ದಿ|| ಹನುಮಗೌಡ ನಿರ್ಗತಿಕ ವಿಧವಾ ವೇತನಕ್ಕೆ ಆನ್ ಲೈನ್ ಅರ್ಜಿ ಹಾಕಿ ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಚ್ಚಿ ಕೊಟ್ಟರು ಕೂಡ ಅರ್ಹ ಫಲಾನುಭವಿಯನ್ನು ನಾಡ ಉಪ ತಹಶಿಲ್ದಾರ ಬಸವರಾಜ ಅವರು ಹಣ ಕೊಟ್ಟಿಲ್ಲ ಎಂಬ ಉದೇಶಕ್ಕೆ ವಿಧವೆ ಭೂಮಿ ಇಲ್ಲದ ಪರಿಶಿಷ್ಟ ಪಂಗಡ ಮಹಿಳೆಯ ನಿಗದಿತ ಆದಾಯಕ್ಕಿಂತ ಹೆಚ್ಚಿಗೆ ಎಂದು ಹಿಂಬರಹ ನೀಡಿರುವುದು ಇವರಿಗೆ ಅಷ್ಟೇ ಅಲ್ಲ ಸಾಕಷ್ಟು ಜನರಿಗೆ ಅರ್ಜಿ ತಿರಸ್ಕರಿಸಿ ಹಿಂಬರಹ ಮಾಡಿರೋದು ಹಾಗೂ ಕಛೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವುದು ದಲಿತ ಸಂಘಟನೆಯ ಮುಖಂಡ ಬಾಬು ನಾಯಕ ಮಲದಕಲ್ ಖಂಡನೀಯ ಕೂಡಲೇ ನಾಡ ತಹಶಿಲ್ದಾರ ಬಸವರಾಜ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಗಬ್ಬೂರು ಹೋಬಳಿ ವ್ಯಾಪ್ತಿಯ ಬಡ ಜನರನ್ನು ಹಾಗೂ ಸಾರ್ವಜನಿಕರನ್ನು ನಾಡ ಕಚೇರಿಗೆ ಸಾಕಷ್ಟು ಅಲೆದಾಡುವ ಹಾಗೆ ಮಾಡುತ್ತಾರೆ ನಾಡ ಕಚೇರಿಯಲ್ಲಿ ಸಿಗುವ ಎಲ್ಲಾ ಪ್ರಮಾಣಗಳಿಗೆ ಸೂಕ್ತ ಎಲ್ಲಾ ದಾಖಲೆಗಳು ಕೊಟ್ಟರು ಕೂಡ ನಾಡ ತಹಶಿಲ್ದಾರ ಬಸವರಾಜ ಅವರು ತಿರಸ್ಕರಿಸುವುದೆ ಇವರ ನಿತ್ಯ ಕಾಯಕವಾಗಿದೆ ಅವರಿಗೆ ದುಡ್ಡು ಕೊಟ್ಟವರ ಕೆಲಸ ಮಾತ್ರ ಪಕ್ಕ ಹಣ ಕೊಡದೆ ಇರುವವರ ಆರ್ಜಿ ತಿರಸ್ಕರ ಮಾಡುತ್ತಾರೆ ಎಂದು ದಲಿತ ಸಂಘಟನೆಯ ಮುಖಂಡರಾದ ಬಾಬು ನಾಯಕ ಮಲದಕಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.

About The Author