ಕುರುಬರನ್ನು St ಗೆ ಸೇರಿಸಲು ಬೃಹತ್ ಪ್ರತಿಭಟನೆ : ಗೊಂಡ ಪರ್ಯಾಯ ಪದವೇ ಕುರುಬರು : ಕುರುಬರು ಸುಳ್ಳು ಹೇಳಿ ಎಸ್ಟಿ ಪ್ರಮಾಣ ಪತ್ರ ತೆಗೆದುಕೊಳ್ಳುವವರಲ್ಲ : ಸಿದ್ದರಮಾನಂದಪುರಿ ಶ್ರೀ

ಶಹಾಪುರ :  ಕರ್ನಾಟಕ ಪ್ರದೇಶ ಗೊಂಡ (ಕುರುಬ) ಸಂಘದ ನೇತೃತ್ವದಲ್ಲಿ ಕುರುಬರಿಗೆ ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರದ ಸಿಬಿ ಕಮಾನದಿಂದ ಬಸವೇಶ್ವರ ವೃತ್ತದ ವರೆಗೆ ತಾಲೂಕಿನ ಎಲ್ಲ ಕುರುಬ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಉಮಾ ಕಾಂತ್ ಹಳ್ಳಿ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.ಈ ಪ್ರತಿಭಟನೆ ನೇತೃತ್ವ ವಹಿಸಿ ತಿಂಥಣಿಯ ಕನಕ ಗುರುಪೀಠದ ಪೂಜ್ಯ ಶ್ರೀ ಸಿದ್ದರಮಾನಂದಪುರಿ ಶ್ರೀಗಳು ಮಾತನಾಡಿ, ಕುರುಬ ಸಮುದಾಯದ ಎಸ್ಟಿ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಸಮಾಜದ ಕಟ್ಟಕಡೆಯ ವ್ಯಕ್ತಿಯ ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯ ಪಡೆಯುವ ನ್ಯಾಯಯುತ ಹೋರಾಟವಾಗಿದೆ. ಗೊಂಡ ಪರ್ಯಾಯ ಪದವೇ ಕುರುಬ. ಕೆಲವರು ಗೊಂಡರು ಎಸ್ಟಿ ಸುಳ್ಳು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಯಾರು ಸುಳ್ಳು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವುದಿಲ್ಲ.

ನಮ್ಮದು ನ್ಯಾಯೋಚಿತ ಬೇಡಿಕೆಯಾಗಿದೆ.500 ವರ್ಷಗಳ ಹಿಂದೆ ಕುರುಬರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಅಲೆಮಾರಿಗಳಾಗಿ, ಸಂಚಾರಿಗಳಾಗಿ ಊರೂರು ಸುತ್ತಿದ್ದರು. ರಸ್ತೆಗಳಲ್ಲೆ ವಾಸಿಸುತ್ತಿದ್ದರು. ಬ್ರಿಟಿಷರ ಕಾಲದಲ್ಲೆ ಎಲೆಜಬತ್ ರಾಣಿಯವರು ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ನಂತರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ರವರು ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ಹಾಗಾಗಿ ನಾವು ಎಸ್ಟಿಗೆ ಸೇರಿಸಿರಿ ಎಂದು ಹೊಸದಾಗಿ ಕೇಳುತ್ತಿಲ್ಲ. ನಮ್ಮದು ನ್ಯಾಯೋಚಿತ ಬೇಡಿಕೆಯಾಗಿದೆ. ನಮ್ಮ ಬೇಡಿಕೆ ಈಡೇರವರಿಗೂ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಇದೆ ವೇಳೆ ಮಾತನಾಡಿದ ಕುರುಬ ಸಂಘದ ತಾಲೂಕ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಅವರು, ದೇವರಾಜ ಅರಸ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು.ಆ ಎಲ್ಲಾ ಮನವಿಗಳು ಮಾಹಿತಿ ಕೊರತೆಯಿಂದ ವಾಪಸ್ ಬಂದಿವೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದರು ಇಲ್ಲಿವರೆಗೂ ಅದು ವರದಿ ಕಾರ್ಯಗತಗೊಳಿಸದೆ ಇರುವುದು ದುರಂತ. ಕುಲಶಾಸ್ತ್ರೀಯ ಅಧ್ಯಯನದ ಕೆಲವು ಲೋಪದೋಷಗಳನ್ನು ಸರಿಪಡಿಸಿ 2014ರಲ್ಲಿ ರಾಜ್ಯ ಸರ್ಕಾರ ಪುನಃ ಕೇಂದ್ರ ಸರಕಾರಕ್ಕೆ ವರದಿ ಕಳಿಸಕೊಡಲಾಗಿತ್ತು. ವರದಿ ಕಳಿಸಿ ಸುಮಾರು ಹತ್ತು ವರ್ಷಗಳು ಕಳೆದರೂ ವರದಿಯ ಬಗ್ಗೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಕುರುಬರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ. ಕುರುಬರನ್ನು ಎಸ್ ಟಿ ಗೆ ಸೇರಿಸುವವರಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಬದಲಿಗೆ ಹೋರಾಟ ಇನ್ನು ಹೆಚ್ಚಿನ ರೀತಿಯಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಅಮಾತೆಪ್ಪ ಕಂದಕೂರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮರಿಗೌಡ ಹುಲ್ಕಲ್, ಬಸವರಾಜ್ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಶಿವಮಾಂತು ಚಂದಾಪುರ ಮಾತನಾಡಿದರು.ಡಾ. ದೇವಿಂದ್ರಪ್ಪ ಸುರಪುರ, ಶಾಂತಗೌಡ ನಾಗನಟಿಗಿ, ಶರಬಣ್ಣ ರಸ್ತಾಪೂರ, ಧರ್ಮಣ್ಣ ಹೋತಪೆಟ್, ಧರ್ಮಣ್ಣ ಯಾದಗಿರಿ, ರವಿ ರಾಜಾಪುರ, ಮಾಳಪ್ಪ ಸುಂಕದ ಕೆಂಭಾವಿ,ಬಲಭೀಮ ಮಡ್ನಾಳ, ಸಿದ್ದಪ್ಪ ಚಟ್ಟಳ್ಳಿ,ನಿಂಗಣ್ಣ ರಾಜಾಪುರ, ದೇವೇಂದ್ರಪ್ಪ ಮೇಟಿ, ಮಲ್ಲನಗೌಡ ಬಿರಾದರ್ ಸೇರಿದಂತೆ ಸಾವಿರಾರು ಜನ ಕುರುಬರು ಹೋರಾಟದಲ್ಲಿ ಭಾಗವಹಿಸಿದ್ದರು.

1950ರಲ್ಲೇ ನಮಗೆ ಎಸ್ಟಿಗೆ ಸೇರ್ಪಡೆ ಆಗುವ ಅವಕಾಶ ಇತ್ತು. 23 ವರ್ಷಗಳಲ್ಲಿ ಎರಡು ಬಾರಿ ಕೇಂದ್ರಕ್ಕೆ ಶಿಫಾರಸು ಆದರೂ ನಮಗೆ ನ್ಯಾಯ ದೊರಕಿಲ್ಲ.ಎರಡು ಪ್ರಮುಖ ಬೇಡಿಕೆಗಳೊಂದಿಗೆ ಕಾಗಿನೆಲೆಯಿಂದ ಹೋರಾಟ ಆರಂಭಿಸಲಾಗಿದೆ. ಕುರುಬರು ಭಾರತದ ಮೂಲ ನಿವಾಸಿಗಳು. 1868 ಮತ್ತು 1901ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಕೈಬಿಡಲಾಗಿದೆ. ದೇವರಾಜ ಅರಸು ಆಡಳಿತದ ಅವಧಿಯಲ್ಲಿ ಜೇನು ಕುರುಬ ಮತ್ತು ಕಾಡು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು. ನಂತರದಲ್ಲಿ ಅದನ್ನು ಕೈ ಬಿಡಲಾಗಿದೆ. ಕುರುಬರು ಎಲ್ಲಿವರೆಗೆ ಸಂಘಟನಾತ್ಮಕವಾಗಿ ಹೋರಾಟ ಮಾಡುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಹಚ್ಚಿದ ಹೋರಾಟದ ಕಿಡಿ ಮುಂದೊಂದು ದಿನ ಧಗದಗಿಸುತ್ತದೆ ಎಂದರು.

ಶರಣಪ್ಪ ಸಲಾದಪುರ
ಸಮಾಜದ ಹಿರಿಯ ಮುಖಂಡರು

1994 ರಲ್ಲಿ ರಾಜ್ಯ ಸರ್ಕಾರ ಗೊಂಡ ಪದ ಕುರುಬ ಪದಕ್ಕೆ ಸಮ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಎಂಟು ವರ್ಷಗಳ ನಂತರ ಕೇಂದ್ರ ಸರ್ಕಾರ ಹಿಂದಿರುಗಿ ಕಳಿಸಿತ್ತು. ರಾಜ್ಯ ಸರ್ಕಾರ ಕುಲ ಶಾಸ್ತ್ರಿಯ ಅಧ್ಯಯನ ನಡೆಸಿ 2014ರಲ್ಲಿ ಮತ್ತೆ ಕೇಂದ್ರ ಸರ್ಕಾರಕ್ಕೆ ಕಳಿಸಲಾಯಿತು.ಕೇಂದ್ರ ಸರ್ಕಾರ ಅತ್ಯಂತ ನಿಷ್ಕಾಳಜಿ ತೋರಿಸುತ್ತಿದೆ. ಹೋರಾಟ ಅನಿವಾರ್ಯವಾಗಿದೆ. ಕುರುಬರು ಗೊಂಡ ಜೇನು ಎಲ್ಲವೂ ಒಂದೇ.ಎಸ್ಟಿ ಪ್ರಮಾಣಪತ್ರ ಸಿಗಬೇಕಿದೆ. ಹೋರಾಟ ಮುಂದುವರೆಯಲಿದೆ. ನಮ್ಮ ಹೋರಾಟ ನಮ್ಮ ಹಕ್ಕನ್ನು ಸಿಗುವವರೆಗೂ ಹೋರಾಟ ಮಾಡೋಣ. ಅಂದಾಗ ಯಶಸ್ವಿಯಾಗಲು ಸಾಧ್ಯ.

ಮರಿಗೌಡ ಹುಲ್ಕಲ್
ಸಮಾಜದ ಹಿರಿಯ ಮುಖಂಡರು

ಸಮಾಜಿಕ, ಶೈಕ್ಷ ಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಶೋಷಣೆಗೆ ಒಳಗಾಗಿರುವ ಮತ್ತು ಆಧುನಿಕ ಯುಗದಲ್ಲಿಯೂ ಅಲೆಮಾರಿಗಳಾಗಿ ಕುಲಕಸುಬನ್ನು ಮಾಡಿಕೊಂಡು ಜೀವಿಸುತ್ತಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ದಶಕಗಳಿಂದಲೂ ಒತ್ತಾಯಿಸಲಾಗುತ್ತಿದೆ. ಇದನ್ನು ಸರಕಾರಗಳು ಈಡೇರಿಸದೇ ಇರುವುದು ನೋವುಂಟುಮಾಡಿದೆ. ಕುರುಬರು ಒಗ್ಗಟ್ಟಾಗಿ ಸಂಘಟನಾತ್ಮಕವಾಗಿ ಹೋರಾಡಿದರೆ ಮಾತ್ರ ಎಸ್ಟಿಗೆ ಸೇರಲು ಸಾಧ್ಯವಾಗುತ್ತದೆ ಎಂದರು.

ಅಮಾತೆಪ್ಪ ಕಂದಕೂರು
ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರು.

About The Author