ಶಹಾಪುರ : ನಗರದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯದಲ್ಲಿ ರಾಜ್ಯದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರ ಅವರಿಗೆ ತಾಲೂಕು ಬಿಜೆಪಿ ಪಕ್ಷದ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಅಮಿನ್ ರೆಡ್ಡಿ ಅವರು ಮಾತನಾಡಿ ಬಿಜೆಪಿ ರಾಷ್ಟ್ರೀಯ ನೇತಾರರು ಯುವನಾಯಕ ಬಿವೈ ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದು ಸಂತಸದ ವಿಷಯ. ಬಿಜೆಪಿ ಪಕ್ಷ ಯುವ ನೇತಾರರಿಗೆ ಆದ್ಯತೆ ನೀಡಿದ್ದು ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದರು.ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಡಾ|| ಚಂದ್ರಶೇಖರ ಸುಬೇದಾರ, ಬಸವರಾಜಪ್ಪಗೌಡ ವಿಭೂತಿಹಳ್ಳಿ,ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೋನೆರ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಕಂದಕೂರ, ಉಮೇಶ ಮಹಾಮನಿ, ಬಸವರಾಜ ಅರುಣಿ, ರಂಗಣ್ಣ ಜಿರ್ಲೆ, ಸಿದ್ದಯ್ಯಸ್ವಾಮಿ ಹಿರೇಮಠ, ರಾಘವೇಂದ್ರ ಯಕ್ಷಂತಿ,
ಶರಣು ಟೊಕಾಪುರ, ಲಕ್ಷ್ಮಿಕಾಂತ ಬಿರಾಳ, ರಮೇಶ ಕೊಲ್ಕರ್, ಮಂಜುನಾಥ್ ಅಲಬನೂರು ಸೋಪಣ್ಣ ಸಗರ್,ಪಕ್ಷದ ಇತರ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.