ದಿವಂಗತ ಶಂಕರ್ ನಾಗ್ ಕನ್ನಡದ ಮೇರು ನಟ : ವಿನೋದ್ ಗೌಡ ದೋರನಹಳ್ಳಿ

yadagiri ವಡಗೇರಾ : ಕನ್ನಡದ ಮೇರು ನಟ ದಿವಂಗತ  ಶಂಕರನಾಗರವರು ಸಿನಿಮಾಲೋಕದಲ್ಲಿ ಅದ್ಭುತ ಸಾಧನೆ ಮಾಡಿದ ಮಹಾನ  ವ್ಯಕ್ತಿ ಎಂದು ಮಾಜಿ  ಜಿಲ್ಲಾ ಪಂಚಾಯತ ಸದಸ್ಯರಾದ ವಿನೋದಪಾಟೀಲ ದೊರನಹಳ್ಳಿ ಹೇಳಿದರು..ಯಾದಗಿರಿ ಪಟ್ಟಣದ ಗಂಜ ಸರ್ಕಲ್ ನಲ್ಲಿ ಕರ್ನಾಟಕ ಚಾಲಕರ ಒಕ್ಕೂಟ ಆಟೋ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡದ ನಟ ದಿವಂಗತ ಶಂಕರನಾಗ ರವರ 69ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
               ಶಂಕರನಾಗ ಅದ್ಭುತ ಕಲಾವಿದರಾಗಿದ್ದರು. ಬೆಂಗಳೂರಿನ ಮೆಟ್ರೋ ಕನಸು ಕಂಡವರಾಗಿದ್ದರು. ಅದು ಇಂದು ನನಸಾಗಿದೆ. ಆಟೋ ಚಾಲಕರ ಕಷ್ಟ ಸುಖಗಳಲ್ಲಿ ಭಾಗಿಯಾದಂತ ವ್ಯಕ್ತಿ  ಅವರ ತತ್ವ ಆದರ್ಶಗಳನ್ನು ಪಾಲಿಸುತ್ತಿರುವ ನಮ್ಮ ಆಟೋ ಚಾಲಕರು ಇಂದಿಗೂ ಕೂಡ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
             ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಸನ್ನಿಗೌಡ ತುನ್ನೂರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಾಂತು ಪಾಟೀಲ್ ಮದ್ರಿಕಿ,  ರೈತ ಮುಖಂಡ ಮಹಾವೀರ ಲಿಂಗೇರಿ,ಚಾಲಕ ಸಂಘದ ಸಂಘದ ಅಧ್ಯಕ್ಷರಾದ ಬಸನಗೌಡ ಚಟ್ನಳ್ಳಿ. ಮಲ್ಲಿಕಾರ್ಜುನ್ ಕೊಲ್ಲೂರು. ಶಾರುಕ ಸಾಬ್. ಸಾಬಣ್ಣ ಬಡಿಗೇರ್. ಜಗದೀಶ್‌ ಸುರಪೂರ. ಹಾಗೂ ಇನ್ನಿತರ ಉಪಸ್ಥಿತರಿದ್ದರು

About The Author