ಜಿಲ್ಲಾ ಮಟ್ಟದ  ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸೋಬಾನೆ ಹಾಡುಗಾರ್ತಿ ನಾಟಿ ವೈದ್ಯೆ ಬೂದೇಮ್ಮ ಆಯ್ಕೆ 

ವಡಗೇರಾ : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನಾಟಿ ವೈದ್ಯೆ ಸೋಬಾನೆ ಪದಗಳ ಹಾಡುಗಾರ್ತಿ ಬೂದೇಮ್ಮ ಹಣಮಂತರಾಯ ಜಡಿ ಅವರಿಗೆ ಲಭಿಸಿದೆ. ಜಿಲ್ಲಾಡಳಿತ ವತಿಯಿಂದ ನೀಡುವ ಪ್ರಶಸ್ತಿಗೆ ಈ ಬಾರಿ ಅವರು ಭಾಜನರಾಗಿದ್ದಾರೆ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಆರೋಗ್ಯ ಸೇವೆ ಹಾಗೂ ಗ್ರಾಮೀಣ ಜಾನಪದ ಸೊಗಡಿನ ಸೋಬಾನೆ ಪದಗಳನ್ನು ಸ್ವತಹ ರಚಿಸಿ ಹಾಡುವುದರ ಮೂಲಕ ಹೆಸರುವಾಸಿಯಾಗಿದ್ದಾರೆ.ಇವರ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿರುವ ಜಿಲ್ಲಾಡಳಿತ ಕಾರ್ಯ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಹಿಳೆಗೆ ಮುಂದಿನ ದಿನಗಳಲ್ಲಿ  ರಾಜ್ಯಮಟ್ಟದ ಪ್ರಶಸ್ತಿ ಸಿಗಲಿ ಎಂದು ಸಂಘ ಸಂಸ್ಥೆಯ ಮುಖಂಡರುಗಳು ಹಾರೈಸಿ ಅಭಿನಂದಿಸಿದ್ದಾರೆ.

About The Author