ಶರನ್ನವರಾತ್ರಿಯ ಅಂಗವಾಗಿ ಮಹಾಶೈವ ಧರ್ಮಪೀಠದಲ್ಲಿ ಎರಡು ರವಿವಾರಗಳಂದು ‘ ಶಿವೋಪಶಮನ ಕಾರ್ಯ’ ಇರುವುದಿಲ್ಲ

ಗಬ್ಬೂರು: ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ 15.10.2023ರಿಂದ 24.10.2023 ರವರೆಗೆ ‘ಮಹಾಶೈವ ಶರನ್ನವರಾತ್ರಿ ಉತ್ಸವ’ ದ ಅಂಗವಾಗಿ ಅಖಂಡಮೌನ ಮತ್ತು ನಿರಾಹಾರ ವ್ರತದೊಂದಿಗೆ ಶ್ರೀದುರ್ಗಾನುಷ್ಠಾನ ಕೈಗೊಳ್ಳಲಿದ್ದಾರೆ.ಆದ್ದರಿಂದ ಮಹಾಶೈವ ಧರ್ಮಪೀಠದಲ್ಲಿ 15.10.2023 ಮತ್ತು 22.10.2023 ರ ಎರಡು ರವಿವಾರಗಳಂದು ‘ ಶಿವೋಪಶಮನ ಕಾರ್ಯ’ ನಡೆಯುವುದಿಲ್ಲ.29.10.2023 ರಿಂದ ಪುನಃ ಎಂದಿನಂತೆ ಶಿವೋಪಶಮನ ಕಾರ್ಯ ನಡೆಯುತ್ತದೆ ಎಂದು ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿಯಾದ ಬಸವರಾಜ ಕರೇಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು 24.10.2024ರಂದು ಮಧ್ಯಾಹ್ನ 2.30 ರ ನಂತರ ಭಕ್ತರುಗಳಿಗೆ ವಿಜಯಾನುಗ್ರಹ ಕರುಣಿಸುವರು.ದೂರ ದೂರದ ಸ್ಥಳಗಳಿಂದ ಬರುವ ಭಕ್ತರುಗಳು ಮತ್ತು ಶಿವೋಪಶಮನಾಕಾಂಕ್ಷಿಗಳು ಎರಡು ರವಿವಾರಗಳ ಕಾಲ ಸಹಕರಿಸಬೇಕು ಎಂದು ಕೋರಲಾಗಿದೆ.

About The Author