ಅಂಗನವಾಡಿ ಶಾಲೆಗಳನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಡಿ : ಶಾಸಕ ಚೆನ್ನಾರೆಡ್ಡಿ ತುನ್ನೂರು

yadagiri ವಡಗೇರಾ : ಅಂಗನವಾಡಿ ಕಟ್ಟಡಗಳನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಅಂಗನವಾಡಿ ಶಿಕ್ಷಕಿಯರಿಗೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು  ಹೇಳಿದರು. ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ 2021-22ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಅಂಗನವಾಡಿ ಶಿಕ್ಷಕಿಯರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸರಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಮಕ್ಕಳಿಗೆ ನೀಡುವುದರ ಜೊತೆಗೆ ಲಾಲನೆ ಪಾಲನೆ ಪೋಷಣೆಯನ್ನು ಮಾಡಬೇಕು. ನಿರ್ಲಕ್ಷವಹಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.ಈ  ಗ್ರಾಮದಲ್ಲಿ ಇನ್ನು ಎರಡು ಅಂಗನವಾಡಿ ಕೇಂದ್ರಗಳ ಅವಶ್ಯಕತೆ ಇದ್ದು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದೇನೆ. ಆದಷ್ಟು ಬೇಗನೆ ಮಾಡಿಸಿಕೊಡುವುದಾಗಿ ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಗ್ರಾಮ ಪಂಚಾಯತ ಅಧ್ಯಕ್ಷೆ ಸುಶೀಲಾ ಶಿವಾನಂದ ಸ್ವಾಮಿ ಕೊಡಾಲ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೇಪ್ಪ ಬಿಳಾರ, ಸಿಡಿಪಿಓ  ಮೀನಾಕ್ಷಿ ಪಾಟೀಲ,ಕಾಂಗ್ರೆಸ್ ಯುವ ಮುಖಂಡ ಬಸುಗೌಡ ಬಿಳಾರ,ಶಿವನಗೌಡ ಪೊಲೀಸ್ ಪಾಟೀಲ್. ಶಾಂತಗೌಡ ಬೆಳ್ಳಿಕಟ್ಟಿ,ಗುರುನಾಥರೆಡ್ಡಿ ಕದರಾಪುರ,ಏಇಇ ಶಿವರಾಜ,ಜೆಇ ಹೊನ್ನಪ್ಪ ಗೋಡಿಹಾಳ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣಸ್ವಾಮಿ, ಸಿದ್ದನಗೌಡ ಬಿರಾದರ, ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಬಸಯ್ಯಸ್ವಾಮಿ  ಒಳಗಿನಮಠ,ಮಹಮ್ಮದ್ ಕಲೆಗಾರ,ಬಂದೇಶಗೌಡ ಐರೆಡ್ಡಿ, ಸೋಮಯ್ಯಸ್ವಾಮಿ ಅಂಗಡಿ,ಅಬ್ದುಲ್ ಚಿಗಾನೂರ, ಜುಬಲಪ್ಪ ದೊರಿ, ಮಲ್ಲಿಕಾರ್ಜುನ್ ಈಟಿ,ಸಿದ್ದಪ್ಪ ನಾಟೇಕಾರ,ತಿಪ್ಪಣ್ಣ ಕದರಾಪುರ, ಅಂಬರೀಶ್ ಜಾಕ, ಶಾಸಕರ ಆಪ್ತ ಸಹಾಯಕರಾದ ರೇವಣಸಿದ್ದಯ್ಯ ಹೊರಪೇಟ ಮಠ, ಅಂಗನವಾಡಿ,ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಕವಿತಾ ಕುಲಕರ್ಣಿ ನಿರೂಪಿಸಿ ವಂದಿಸಿದರು.

About The Author